ಉ.ಕ ಸುದ್ದಿಜಾಲ ಚಿಕ್ಕೋಡಿ :
ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಹೊರವಲಯದಲ್ಲಿ ರವಿವಾರ ರಾತ್ರಿ 8 ಗಂಟೆಗೆ ನಡೆದಿದೆ.
ಹುಸೇನಸಾಬ ದಸ್ತಗಿರ ಪರೀಟ್ 25 ಕೊಲೆಯಾದ ದುರ್ದೈವಿ. ಇಮ್ಮಿಯಾಜ್ ಶೇಗಡಿ 25 ಕೊಲೆ ಮಾಡಿರುವ ಆರೋಪಿ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ನಿವಾಸಿಗಳಾದ ಹುಸೇನ್ ಸಾಬ್ ಪರೀಟ್ ಹಾಗೂ ಸ್ನೇಹಿತ ಇಮ್ಮಿಯಾಜ್ ಅನ್ವರ ಶೆಗಡಿ ಇಬ್ಬರು ಅಂಕಲಿ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಮೀನು ಹಿಡಿಯಲು ಬಂದಿದ್ದರು.
ಮಹಾರಾಷ್ಟ್ರದ ಸಾಂಗಲಿ ನಗರಕ್ಕೆ ಹೋಗುವ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ನಡೆದಾಗ ಇಮ್ಮಿಯಾಜ್ ಅನ್ವರ ಶೆಗಡಿ ಕಟ್ಟುಗೆಯಿಂದ ಹುಸೇನ್ ಸಾಬ್ ಪರೀಟ್ ತಲೆ ಮೇಲೆ ಹೊಡೆದ ಪರಿಣಾಮ ಹುಸೇನ್ ಸಾಬ್ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.
ಸ್ಥಳಕ್ಕೆ ಚಿಕ್ಕೋಡಿಯ ಸಿಪಿಐ ವಿಶ್ವನಾಥ್ ಚೋಲ ಅಂಕಲಿ ಪೊಲೀಸ ಹಳೆಯ ಪಿಎಸ್ಐ ನಂದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.