ಉ.ಕ ಸುದ್ದಿಜಾಲ ಅಥಣಿ :
ಗಡಿಯಲ್ಲಿ ಮಹಿಳೆಯ ಭೀಕರ ಕೊಲೆಯಾಗಿದ್ದು, ಇದು ಕೊಲೆಯಲ್ಲ ಬೈಕ್ ಅಪಘಾತವೆಂದು ಬಿಂಬಿಸಿಸಲು ಯತ್ನಿಸಿದ ಹಂತಕರನ್ನ ಪೊಲೀಸರು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಲಬಾದ ಗ್ರಾಮದ ರೇಣುಕಾ ಸಂತೋಷ ಹೋನಕಾಂಡೆ (27) ಮೃತ ಮಹಿಳೆಯಾಗಿದ್ದು. ನಿನ್ನೆ ತಡ ರಾತ್ರಿ 9:00 ಗಂಟೆ ಸುಮಾರಿಗೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಅಥಣಿಯಿಂದ ಬೈಕ್ ಮೇಲೆ ಹೊರಟಾಗ ಬೈಕ್ ಚಕ್ರಕ್ಕೆ ಸೀರೆ ಸಿಲುಕಿ ಮಹಿಳೆ ಬಿದ್ದು ಸಾವನ್ನಪ್ಪಿದ್ದಾಳೆ. ಎಂದು ಬಿಂಬಿಸಲು ಹೋರಟ ಹಂತಕರನ್ನ ಸಂಸಯಾಸ್ಪದವಾಗಿ ಬಂದಿಸಿದ ಪೊಲೀಸರು.
ತನಿಖೆ ಶುರು ಮಾಡಿ ಇದು ಅಪಘಾತವಲ್ಲ ಕೊಲೆ ಎಂದು ಹೇಳಲಾಗಿದೆ. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಹಿಳೆಯ ಭೀಕರ ಕೊಲೆ, ಗಂಡ ಮಾವ, ಅತ್ತೆ ಅರೆಸ್ಟ್
