ಬೆಳಗಾವಿ :
ಬೆಳಗಾವಿಯ ಆ ಒಬ್ಬ ನಾಯಕನಿಂದ ಕಾಂಗ್ರೆಸ್ ಗೆ ನಿರಂತರ ಸೋಲು ಅನುಭವಿಸುತ್ತಿದೆ. ಕಾಂಗ್ರೆಸ್ ಅಂದ್ರೆ ನಾನೇ ಅಧಿಪತಿಯಾಗಬೇಕು ಅಂತ ಆತ ಅಂದುಕೊಂಡಿದ್ದಾನೆ. ಕಳೆದ ಲೋಕಸಭಾ, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋಲು ಇದೇ ಕಾರಣಕ್ಕಾಗಿ ನಾನು ರಂಗಪ್ರವೇಶ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಆ ವ್ಯಕ್ತಿಯಿಂದ ಯಾರೊಬ್ಬರೂ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ಹೆಸರು ಹೇಳದೆ ಕಾಂಗ್ರೆಸ್ ನಾಯಕನ ವಿರುದ್ದ ಹರಿಹಾಯ್ದ ಸತೀಶ ಜಾರಕಿಹೊಳಿ.