ಉ.ಕ ಸುದ್ದಿಜಾಲ ಬೆಳಗಾವಿ :

ದೇಶ ಕಾಯೋ ಯೋಧನಿಗೆ ತನ್ನದೆಯಾದ ಗೌರವ ಹೊಂದಿದ್ದು ಯೋಧ ಮರಣ ಹೊಂದಿದ್ದರು ಅವರಿಗೆ ಯಾವೊಬ್ಬ ಜನಪ್ರತಿನಿಧಿ ಗೌರವ ತೊರಿಲ್ಲ ಎಂದು ಬೆಳಗಾವಿ ಜಿಲ್ಲೆಯ ಮಾಜಿ ಸೈನಿಕರ ಸಂಘಟನೆಗಳ ಮಹಾಒಕ್ಕೂಟ ಆಕ್ರೋಶ ಹೊರಹಾಕಿದ್ದಾರೆ.

ಹೌದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಇರಣಟ್ಟಿ ಗ್ರಾಮದ ಸೇವಾನಿರತ ಸೈನಿಕ ಮಹೇಶ ಎನ್ ವಾಲಿ (24) ದೇಶ ಸೇವೆಯನ್ನು ಸಲ್ಲಿಸುತ್ತಿರುವಾಗ ನಡೆದಿರುವ ಒಂದು ಘಟನೆಯಲ್ಲಿ ವೀರಮರಣ ಹೊಂದಿದ್ದು ಇವತ್ತು ಬೆಳಗ್ಗೆ ಯೋಧನ ಪಾರ್ಥಿವ ಶರೀರ ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಸೇರಿದ ಎಲ್ಲಾ ಮಾಜಿ ಸೈನಿಕರು ಹಾಗೂ ಸ್ಥಳೀಯ ಸೇನಾಧಿಕಾರಿಗಳು ಜಿಲ್ಲಾಧಿಕಾರಿಗಳು ಮೃತ ಯೋಧನಿಗೆ ಗೌರವ ನಮನ ಸಲ್ಲಿಸಿದರು.

ಆದರೆ ಇಡೀ ರಾಜ್ಯದ ರಾಜಕೀಯ ನಾಯಕರುಗಳೆಲ್ಲ ಬೆಳಗಾವಿ ಅಧಿವೇಶನದಲ್ಲಿ ಬೀಡು ಬಿಟ್ಟಿದ್ದು ಯಾರೊಬ್ಬ ರಾಜಕೀಯ ನಾಯಕರು ಕೂಡ ಸೈನಿಕನ ಗೌರವ ನಮನ ಕಾರ್ಯಕ್ರಮಕ್ಕೆ ಬಾರದಿರುವುದು ತುಂಬಾ ಬೇಸರವನ್ನುಂಟು ಮಾಡಿದೆ. ರಾಜಕೀಯ ನಾಯಕರುಗಳಿಗೆ ರೈತರು ಮತ್ತು ಸೈನಿಕರ ಮೇಲೆ ಪ್ರೀತಿ ಅನುಕಂಪ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿದ್ದು. ಇವತ್ತಿನ ರಾಜಕೀಯ ನಾಯಕರ ನಡೆಯಿಂದ ಸೈನಿಕ ಸಮುದಾಯಕ್ಕೆ ತುಂಬಾ ನೋವುಂಟಾಗಿದೆ ಎಂದು ಮಾಜಿ ಸೈನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಯೋಧ ಸಾವನಪ್ಪಿದ್ದು ಹೇಗೆ?

ಜಮ್ಮುಕಾಶ್ಮೀರ ಲೇಹ ಎನ್ನುವ ಗಡಿ ಭಾಗದಲ್ಲಿ ಮೈನಸ್ 20 ಡಿಗ್ರಿ ಸೆಲ್ಸಿಯಸ್ ಚಳಿ ಹಿನ್ನಲೆ ರಸ್ತೆ ಮೇಲೆ ಮಂಜಿನ‌ ಉಂಡೆ ಬಿದ್ದಿದ್ದು ರಸ್ತೆ ಮೇಲಿನ ಮಂಜಿನ ಉಂಡೆಯನ್ನು ಇಟ್ಯಾಚ್ ವಾಹನದ‌ ಮೂಲಕ ತೆಗೆಯುವ ಸಮಯದಲ್ಲಿ ಗುಡ್ಡದಿಂದ ಮೂರು ಟನ್ ಭಾರವುಳ್ಳ ಕಲ್ಲೊಂದು ಹಿಟ್ಯಾಚ ಮೇಲೆ ಬಿದ್ದ ಪರಿಣಾಮ ಯೋಧ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ.

ಇಂಡಿಯನ್ ಆರ್ಮಿ ಬಾರ್ಡರ ರೋಡ ಆರ್ಗನೈಜೆಶನ್ ಯುನಿಟ್ ನಲ್ಲಿ ಯೋಧ ಮಹೇಶ ಎನ್ ವಾಲಿ ಕೆಲಸ ಮಾಡುತ್ತಿದ್ದ ಲಡಾಕ ಕೆಂದ್ರಾಡಳಿತ ಪ್ರದೇಶದಲ್ಲಿ ನಿಮೋ ಪದಂ ಡಾರ್ಚಾ ರೋಡ ಮಾಡುವಾಗ ಗಿಡ್ಡದ ಮೇಲಿಂದ ಕಲ್ಲು ಬಿದ್ದು ಯೋಧ ಸಾವಿಗಿಡಾಗಿದ್ದಾನೆ ದೇಹವೆಲ್ಲ ಛಿದ್ರವಾಗಿದ್ದು ಯೋಧ ಮಹೇಶನ ಕಾಲುಗಳು ಮಾತ್ರ ಪತ್ತೆಯಾಗಿವೆ.

ಇದೇ 2025 ಫೇಬ್ರುವರಿಯಲ್ಲಿ ಮಹೇಶನ ಮದುವೆ ಕೂಡಾ ನಿಶ್ಚಿಯವಾಗಿತ್ತು ಆದರೆ, ಆತನ ದುರದೈವ ವಿಧಿ ಲಿಖಿತ ಬೇರೆನೆ ಆಗಿದ್ದು ಇದೇ ಡಿಸೆಂಬರ 14 ಸಾವನಪ್ಪಿದ್ದು ಮಂಗಳವಾರ ಪಾರ್ಥಿವ ಶರೀರ ಬೆಳಗಾವಿಯ ಸ್ವ ಗ್ರಾಮಕ್ಕೆ ಆಗಮಿಸಿದ್ದು ಕುಟುಂಬಸ್ಥರ ಆಕ್ರಂಧನ ಮುಗಿಲುಮುಟ್ಟಿದೆ