ಉ.ಕ ಸುದ್ದಿಜಾಲ ದಾವಣಗೆರೆ :

ಸಾವಿನಲ್ಲೂ ಒಂದಾದ ವೃದ್ದ ದಂಪತಿಗಳು ಗಂಡನ ಸಾವಿನ ಸುದ್ದಿ ಕೇಳಿ ಪತ್ನಿಯೂ ಹೃದಯಾಘಾತದಿಂದ ಸಾವು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ದೇವರ ಹಳ್ಳಿ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ.

ದೇವರಹಳ್ಳಿ ಗ್ರಾಮದ ಕಸ್ತೂರಿ ರಂಗಪ್ಪ (65) ಜಯಮ್ಮ (61) ಮೃತ ದುರ್ದೈವಿಗಳು ನಿನ್ನೆ ಕಸ್ತೂರಿ ರಂಗಪ್ಪ ಪಡಿತರ ಅಕ್ಕಿ ತರಲು ಹೋಗಿದ್ದರು ಈ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದರು

ತಕ್ಷಣ ಅವರನ್ನ ಚನ್ನಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಕಸ್ತೂರಿ ರಂಗಪ್ಪ ಅವರ ಸಾವಿನ ಸುದ್ದಿಯನ್ನ ಪತ್ನಿ ಜಯಮ್ಮಗೆ ಕರೆ ಮಾಡಿ ತಿಳಿಸಿದ್ದಾರೆ

ಪತಿಯ ಸಾವಿನ ಸುದ್ದಿ ಪೋನ್ ನಲ್ಲಿ ತಿಳಿಯುತಿದ್ದಂತೆ ಜಯಮ್ಮ ಕೂಡ ಕುಸಿದು ಬಿದ್ದು ಸಾವು ಸಾವಿನಲ್ಲೂ ಒಂದಾದ ದಂಪತಿಗಳು ಇಬ್ಬರನ್ನೂ ದೇವರಹಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ.