ಉ.ಕ ಸುದ್ದಿಜಾಲ ಕಾಗವಾಡ :
ಕುಡಿದ ಅಮಲಿನಲ್ಲಿ ಬೈಕ ಓಡಿಸುವಾಗ ಬೈಕ್ ಸ್ಕಿಡ್ ಆದ ಪರಿಣಾಮ ಬೈಕ ಸವಾರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಸರಿಯಾದ ವೇಳೆಗೆ ಚಿಕಿತ್ಸೆ ನೀಡದ ಹಿನ್ನಲೆಯಲ್ಲಿ ಸಾವನಪ್ಪಿರುವ ಗಹಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಿನ್ನೆ ತಡರಾತ್ರಿ ಅಪಘಾತ ಚಿಕಿತ್ಸೆ ನೀಡದ ಹಿನ್ನಲೆ ಸಾವು ಪ್ರಶಾಂತ ಕಣ್ಣೇಶ ಶೇಡಬಾಳೆ (25) ಸಾವನಪ್ಪಿದ ಯುವಕ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ನಿವಾಸಿ ಪ್ರಶಾಂತ ಸಾವನಪ್ಪಿದ್ದಾನೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ರಾತ್ರಿ ಅಪಘಾತ ನಡೆದಿದೆ.
ಮೋಳೆ ಗ್ರಾಮದಲ್ಲಿ ಅಪಘಾತ ನಡೆದಿದ್ದು ಸರಿಯಾದ ವೇಳೆಗೆ ಚಿಕಿತ್ಸೆ ನೀಡದ ಹಿನ್ನಲೆ ಸಾವು ಕುಡಿದ ಅಮಲಿನಲ್ಲಿ ಬೈಕ ಸ್ಕಿಡ್ ಆಗಿ ಅಪಘಾತ ಮೋಳೆ ಗ್ರಾಮದಲ್ಲಿ ಜಾತ್ರೆ ಮುಗಿಸಿಕೊಂಡು ಹಾರೂಗೇರಿಗೆ ತೆರಳುವಾಗ ಮೋಳೆ ತಂಗಡಿ ರಸ್ತೆ ಮಧ್ಯದಲ್ಲಿ ಅಪಘಾತ ಪ್ರಶಾಂತ ಕಣ್ಣೇಶ ಶೇಡಬಾಳೆ ಹಾಗೂ ಆತನ ಗೆಳೆಯ ಒಂದೇ ಬೈಕನಲ್ಲಿ ಹಾರೂಗೇರಿಗೆ ತೆರಳುವಾಗ ಅಪಘಾತ
ಪ್ರಶಾಂತಗೆ ಗಂಬೀರ ಗಾಯವಾಗಿದೆ. ಅಪಘಾತದ ಬಗ್ಗೆ ಮೋಳೆಯ ಗೆಳೆಯರಿಗೆ ಕರೆ ಮಾಡಿ ಅಪಘಾತದ ಬಗ್ಗೆ ಮಾಹಿತಿ ಅಫಘಾತದ ಬಗ್ಗೆ ತಿಳಿದ ಗೆಳೆಯರು ಅಥಣಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಗೆಳೆಯರು. ವೈದ್ಯರು ಪ್ರಶಾಂತಗೆ ಸ್ಕ್ಯಾನ ಮಾಡಿಕೊಂಡು ಬಂನ್ನಿ ಎಂದು ಹೇಳಿದ್ದಾರೆ
ಆದರೆ ಸ್ಕ್ಯಾನಿಂಗ ಮಾಡಿಸದೆ ಕುಡಿದ ಅಮಲಿನಲ್ಲಿ ಪ್ರಶಾಂತನನ್ನ ಕರೆತಂದು ಕೆಂಪವಾಡ ಬಳಿ ತಂದು ಬಿಟ್ಟಿದ್ದಾರೆ. ಕುಡಿದ ಅಮಲಿನಲ್ಲಿದ್ದ ಗೆಳೆಯರೆಲ್ಲರೂ ಪ್ರಶಾಂತಗೆ ಏನೂ ಆಗಿಲ್ಲ ಎಂದು ಹೇಳಿ ಕೆಂಪವಾಡ ಬಳಿ ರಾತ್ರಿ ಬಿಟ್ಟು ಹೊಇಗಿದ್ದಾರೆ. ಆದರೆ, ತೀರ್ವ ರಕ್ತ ಸ್ರಾವದಿಂದ ಪ್ರಶಾಂತ ಸಾವನಪ್ಪಿದ್ದಾನೆ.
ಪ್ರಶಾಂತ ಸಾವಿನ ಸುದ್ದಿ ತಿಳಿದು ಸ್ಥಳಕ್ಕೆ ಅಥಣಿ ಸಿಪಿಐ ರವೀಂದ್ರ ನಾಯ್ಕೊಡಿ ಕಾಗವಾಡ ಪಿಐ ಹನಮಂತ ನರಳೆ ಬೇಟಿ ನೀಡಿ ವಿಚಾರಿಸಿದಾಗ ಪ್ರಸಾಂತನ ಗೆಳೆಯರು ನಡೆದ ವಿಚಾರ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಕಾಗವಾಡ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.