ಉ.ಕ ಸುದ್ದಿಜಾಲ ಕಾಗವಾಡ :
10 ವರ್ಷದಲ್ಲಿನ ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡುವುದರ ಜೊತೆಗೆ ನಮ್ಮ ಸರ್ಕಾರದ ಜನಪರ ಕಾರ್ಯಕ್ರಮಗಳ ಆಧಾರದ ಮೇಲೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಜನರ ಬಳಿ ಕೇಳಿಕೊಳ್ಳುತ್ತೇವೆ ಎಂದು ಮಾಜಿ ಡಿಸಿಎಂ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಸವದಿ ಅವರು ಶನಿವಾರ ಕಾಗವಾಡ ತಾಲೂಕಿನ ಉಗಾರ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. “ದೇಶದಲ್ಲಿ ಬದಲಾವಣೆ ತರುತ್ತೇವೆ, ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಮತ ಪಡೆದು ಪ್ರಧಾನಿ ಮೋದಿ ಜನರಿಗೆ ಮೋಸ ಮಾಡಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದಲ್ಲಿನ ನದಿಗಳನ್ನು ಜೋಡಣೆ ಮಾಡುವ ಕನಸ್ಸನ್ನು ಜನರಲ್ಲಿ ಬಿತ್ತಿ ಅವುಗಳನ್ನು ಪೂರ್ಣಗೊಳಿಸಲು ಮೋದಿ ಸರ್ಕಾರ ವಿಫಲವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವ ಮೂಲಕ ಬಿಜೆಪಿಗೆ ಪಾಠ ಕಲಿಸಬೇಕಾಗಿದೆ” ಎಂದರು.
ನಾವೆಲ್ಲ ಕೇಂದ್ರ ಸರ್ಕಾರದ ಕೆಲಸಗಳನ್ನ ನೋಡಿದ್ದೇವೆ. 2014 ರಲ್ಲಿ ಬಿಜೆಪಿ ಪ್ರಚಾರ ವೇಳೆ ದೇಶ ಬದಲಾವಣೆ ಹಾಗೂ ರೈತರ ಆದಾಯ ದ್ವಿಗಣ ಮಾಡತ್ತೀವಿ ಆದರೆ ಈವರೆಗೂ ರೈತರ ಏಳಿಗೆ ದ್ವಿಗೂಣವಾಗಿಲ್ಲ. ನದಿ ಜೋಡಣೆ ಕಾರ್ಯ ಆಗುತ್ತೆ, ಇಡೀ ದೇಶದಲ್ಲಿ ಬುಲೆಟ್ ಟ್ರೇನ್ ಓಡಿಸುತ್ತೆವೆ. ಡಾಲರ್ ರೇಟ್ 10 ರೂ. ಮಾಡತ್ತೀವಿ ಅಂತಾ ಬಿಜೆಪಿಯವರ ಹೇಳಿದ್ದರು. ಆದರೆ ಈವರೆಗೂ ಬಿಜೆಪಿ ಸರ್ಕಾರ ಯಾವುದೇ ಕಾರ್ಯ ಮಾಡಿಲ್ಲ.
ಇತಿಹಾಸದ ಮೊದಲ ಬಾರಿಗೆ ಮೋದಿ ಅವರಿಗೆ ಬಹುಮತ ಬರುತ್ತೆ ಅಂತಾ ಬಿಜೆಪಿಯವರು ಹೇಳತ್ತಾರೆ. ರೈತರಿಗೆ ನಾ ಒಂದ ಕೇಳತ್ತೀನಿ ಗಂಗಾ ನದಿ ಕೃಷ್ಣೆಗೆ ಬಂದು ಕೂಡಿತಾ? ಬಿಜೆಪಿಯ ಕಳೆದ ಲೋಕಸಭಾ ಚುನಾವಣೆ ಪ್ರಣಾಳಿಕೆ ವಿರುದ್ದ ವಾಗ್ದಾಳಿ ನಡೆಸಿದ ಲಕ್ಷ್ಮಣ ಸವದಿ
ದೇಶದಲ್ಲಿ ಡಬಲ ಶ್ರೀಮಂತರಾಗಿದ್ದು ಯಾರಾದರು ಇದ್ದರೆ ಅದು ಅದಾನಿ ಹಾಗೂ ಅಂಬಾನಿ ಮುಂಬರುವ ಚುನಾವಣೆಯಲ್ಲಿ ನೀವೆ ಯೋಚನೆ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದ ಸವದಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.