ಉ.ಕ ಸುದ್ದಿಜಾಲ ಮಂಡ್ಯ :

ಪ್ರಮೋದ್ ಮುತಾಲಿಕ್ ಮಂಡ್ಯ ಪ್ರವೇಶಕ್ಕೆ ನಿರ್ಬಂಧ!. ಗಣೇಶ ಮೆರವಣಿಗೆ ವೇಳೆ ಕಲ್ಲುತೂರಾಟ ಪ್ರಕರಣ. ಪ್ರಕರಣ ಖಂಡಿಸಿ ಇಂದು ಮದ್ದೂರು ಪ್ರವಾಸ ಹಮ್ಮಿಕೊಂಡಿದ್ದ ಮುತಾಲಿಕ್.

ಶ್ರೀರಾಮ ಸೇನೆ ಸಂಘಟನೆ ಸಂಸ್ಥಾಪಕರಾದ ಪ್ರಮೋದ್ ಮುತಾಲಿಕಗೆ BNSS ಕಾಯ್ದೆ 163ರ ಅಡಿ ಪ್ರವೇಶಾವಕಾಶಕ್ಕೆ ನಿರ್ಬಂಧ. ಆದೇಶ ಹೊರಡಿಸಿದ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ. ಇಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯ ರಾತ್ರಿ 12ರವರೆಗೆ ನಿರ್ಬಂಧ.

ಹಿಂದೂ ಧರ್ಮದ ಪ್ರಬಲ ಪ್ರತಿಪಾದಕರಾಗಿ, ಪ್ರಚೋದನಾಕಾರಿ, ಕೋಮು ವೈಷಮ್ಯ ಭಿತ್ತುವ, ಪ್ರಚೋದನಾಕಾರಿ ಭಾಷಣ ಮಾಡುವ ಪ್ರವೃತ್ತಿ ಮುತಾಲಿಕ್ ಗೆ ಇದೆ. ಮುತಾಲಿಕ್ ವಿರುದ್ಧ ರಾಜ್ಯಾದ್ಯಂತ 30ಕ್ಕೂ ಹೆಚ್ಚು ಪ್ರಕರಣ ದಾಖಲಾಗಿರುವ ಹಿನ್ನೆಲೆ. ಕೋಮು ಸೌಹಾರ್ದತೆಗೆ ಧಕ್ಕೆಯಾಗುವುದನ್ನ ತಪ್ಪಿಸುವ ಕಾರಣಕ್ಕೆ ನಿರ್ಬಂಧ.