ಉ.ಕ ಸುದ್ದಿಜಾಲ ರಾಯಬಾಗ :

ವಿದ್ಯುತ ತಂತಿ ತಗುಲಿ ಯುವ ರೈತ ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಸ್ತವಾಡ ಗ್ರಾಮದ ಜಳಕಿ ತೋಟದ ಬಳಿ ನಡೆದಿದೆ.

ಬಸ್ತವಾಡ ಗ್ರಾಮದ ನಿವಾಸಿ ಸದಾಶಿವ ಭೀಮಪ್ಪ ಜಳಕಿ (21) ಯುವಕ ವಿದ್ಯುತ ತಂತಿ ತಗೂಲಿ ಸಾವು ವಿದ್ಯುತ ತಂತಿ ಕಟ್ಟಾಗಿದ್ದನ್ನು ನೋಡದೆ ತನ್ನದೇ ಜಮೀನಿನಲ್ಲಿ ಹಾದು ಹೋಗುವಾಗ ತಂತಿಗೆ ತಾಗಿ ಯುವಕ ಸಾವು.

ಸ್ಥಳಕ್ಕೆ ಹಾರುಗೇರಿ ಪೊಲೀಸರು ಹಾಗೂ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮೃತ ಸದಾಶಿವ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಧನವನ್ನು ಹೆಸ್ಕಾಂ ಇಲಾಖೆಯಿಂದ ನೀಡುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.