https://youtu.be/ZfGe8MiO1ew?si=Hj7jfV_dJ4YJR1T8

ಉ.ಕ ಸುದ್ದಿಜಾಲ ಹುಕ್ಕೇರಿ :

ಬೆಳಗಾವಿ ಡಿಸಿಸಿ ಬ್ಯಾಂಕ ಚುನಾವಣೆ ಹಿನ್ನಲೆ ಹುಕ್ಕೇರಿ ತಾಲೂಕಿನಲ್ಲಿ ಲಾಂಗು ಮಚ್ಚುಗಳ ದರ್ಬಾರ, ಲಾಂಗು‌, ಮಚ್ಚು ತೆಗೆದುಕೊಂಡು ಹೋಗುವ ವಿಡಿಯೋ ವೈರಲ ಕತ್ತಿ ಬೆಂಬಲಿಗರಿಂದ ಲಾಂಗ್ ಮಚ್ಚು ತೆಗೆದುಕೊಂಡು ಹೋಗಿದ್ದಾರೆ ಎಂದು ಮಾಜಿ ಸಚಿವ ಶಶಿಕಾಂತ ನಾಯಿಕ ಆರೋಪ ಈ ವಿಚಾರವಾಗಿ ಹುಕ್ಕೇರಿ ಶಾಸಕ ನಿಖೀಲ ಕತ್ತಿ ಪ್ರತಿಕ್ರಿಯೆ ನೀಡಿದ್ದಾರೆ.

ಹೋರಗಿನ ಜನ ಬಂದು ಗಲಾಟೆ ಮಾಡುತ್ತಿರುವ ಹಿನ್ನಲೆ ನಮ್ಮ ಕಾರ್ಯಕರ್ತರು ರೊಚ್ಚಿಗೆದ್ದಿದ್ದರು ಅವರಿಗೆ ತಿಳವಳಿಕೆ ಮಾಡಿ ಅದನ್ನ ಎಲ್ಲ ನಿಲ್ಲಿಸಿದ್ದೇವೆ ಈ ರೀತಿ‌ ಮಾಡಬಾರದು ಅದು ನಮ್ಮ ಸಂಸ್ಕ್ರತಿ ಅಲ್ಲ ನಾವ ಮೊದಲಿನಿಂದಲ್ಲೂ ಸಮಾಧಾನದಿಂದ ಚುನಾವಣೆ ಮಾಡಕ್ಕೊಂಡ ಬಂದಿದ್ದೇವೆ.

ಎಲ್ಲರ ಮನೆಯಲ್ಲಿ ದಸರಾದಲ್ಲಿ ಹಳೆ ವೆಪನ್ಸ್‌ಗಳನ್ನ (ಆಯುಧಗಳನ್ನ) ಪೂಜಾ ಮಾಡುತ್ತಾರೆ. ನಮ್ಮವರು ವೆಪ್ಪನ್ಸ್ ತೊಗೊಂಡ ಬಂದದ್ದು ನಿಜಾ ನಾ ಏನು ಇಲ್ಲ ಅನುತ್ತಿಲ್ಲ. ನಮ್ಮ ಹುಡಗುರ ಮಾಡಿದ್ದು ತಪ್ಪು ಈಗಾಗಲೇ ಅವರಿಗೆ ತಿಳಿ ಹೇಳಿದ್ದೇನೆ

ಬ್ಯಾರೇದಾವರ ನಿಮ್ಮ ಮನೆಗೆ ಕಲ್ಲು ಹೊಡಲಿಕ್ಕೆ ಬಂದಾಗ ನೀವ ಕೈಯಾಗ ಕಟ್ಟಿಗಿ ಹಿಡಿಯುವುದು ಸಹಜ ಹೀಗಾಗಿ ಹಿಡದ್ದ ತೊರಸಿದ್ದಾರೆ ಸುಸುತ್ರವಾಗಿ ವಿದ್ಯುತ್ ಕಂಪನಿಯಿಂದ ಚನ್ನಾಗಿ ನಡೆಯುತ್ತಿದೆ ಅದರ ಮೇಲೆ ಬೇರೆಯವರ ಕಣ್ಣ ಹಾಕುತ್ತಿದ್ದಾರೆ

ಅಲ್ಲಿ ಏನಾದರು ಕೆಟ್ಟಿದ್ದರೆ ಬೇರೆಯವರ ಕಣ್ಣ ಹಾಕಲಿ, ಅಲ್ಲಿ‌ಏನು ತೊಂದರೆ ಏನೂ ಇಲ್ಲ. ನಿರ್ದೇಶಕರನ್ನ ಹೈಜೆಕ ಮಾಡಿ ಅದನ್ನ ಕಪ್ಪಜಾಕೆ ತೆಗೊಂಡು ದರ್ಪ ಮೆರೆದಿದ್ದು ನಮ್ಮ ಜನರಿಗೆ ಬೇಡಾಗಿದೆ ಅದನ್ನ ತಿಳಸ್ಥಾ ಇದ್ದೇವೆ.

ಬಾಲಚಂದ್ರ ಜಾರಕಿಹೋಳಿ ಆಸ್ತಿ ಮಾರಿ ಹುಕ್ಕೇರಿ ಜನರ ಸೇವೆ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ನಿಖೀಲ ಕತ್ತಿ ಅರಭಾವಿ, ಗೋಕಾಕದಲ್ಲಿ ಬಾಲಚಂದ್ರ ಜಾರಜಿಹೋಳಿ ಆಸ್ವಾಸನೆ ನೀಡಿದ್ದಾರೆ ಎಲ್ಲಿ ಪೂರ್ಣ ಮಾಡಿದ್ದಾರೆ ಹೇಳಿ ಹುಕ್ಕೇರಿ ಜನ ಮತದಾನದ ಮೂಲಕ ಹೇಳತ್ತಾರೆ

ಬಾಲಚಂದ್ರ ಜಾರಕಿಗೋಳಿ ಮದುವೆ ಇನ್ನೂಳಿದ ಸಮಾರಂಭಗಳಿಗೆ ಹಣ ನೀಡುವ ವಿಚಾರ ಬಾಲಚಂದ್ರ ಅವರಿಗೆ ಬೇರೆ ಕಡೆಯಿಂದ ಇನ್‌ಕಂ ಇರಬಹುದು ಎಂಎಲ್‌ಎ ಪಗಾರ ಬಿಟ್ಟು ನಮ್ಮ ಮತಕ್ಷೇತ್ರ ಜನ ಜಾಣರಿದ್ದಾರೆ ಸೆ.28 ಆದಮೇಲೆ ಜನಾನೆ ಹೇಳತ್ತಾರೆ.