ಉ.ಕ. ಸುದ್ದಿಜಾಲ ಬೆಳಗಾವಿ :

ಮೂರು ವರ್ಷದ ‌ಬಾಲಕಿ ಮೇಲೆ‌ ಅತ್ಯಾಚಾರಗೈದು ಕೊಲೆಗೈದ ಆರೋಪಿಗೆ ಗಲ್ಲು ಶಿಕ್ಷೆ ಕಾನೂನು ಪ್ರಾಧಿಕಾರದಿಂದ ಮೃತ ಬಾಲಕಿ ಪೋಷಕರಿಗೆ 3 ಲಕ್ಷ ‌ಪರಿಹಾರ ಘೋಷಿಸಿ ತೀರ್ಪು

ಬೆಳಗಾವಿ ‌ಜಿಲ್ಲಾ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶೆ ಸಿ‌.ಎಂ. ಪುಷ್ಪಲತಾ ಮಹತ್ವದ ಆದೇಶ ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಉದ್ದಪ್ಪ ರಾಮಪ್ಪ ಹಾರೂಗೇರಿ ಶಿಕ್ಷೆಗೆ ಒಳಗಾದವ. 2017ರಲ್ಲಿ ಮನೆ ಎದುರು ಆಟ ಆಡುತ್ತಿದ್ದ ಬಾಲಕಿಗೆ ಚಾಕೊಲೇಟ್ ಕೊಡಿಸಿರುವ ಆರೋಪಿ.

ಬಳಿಕ‌ ಬಾಲಕಿ ಎತ್ತಿಕೊಂಡು ಕಬ್ಬಿನ ಗದ್ದೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ಕಾಮುಕ ಅತ್ಯಾಚಾರಗೈದ ಬಳಿಕ ಬಾಲಕಿ ಕೊಲೆಗೈದು ಬಾಯಿ, ಕಣ್ಣು, ಮೂಗಿಗೆ‌ ಮಣ್ಣು ಹಾಕಿ ಪರಾರಿ ಹಾರೂಗೇರಿ ಪೊಲೀಸ್ ‌ಠಾಣೆಯಲ್ಲಿ ದೂರು‌ ದಾಖಲಿಸಿದ್ದ ಬಾಲಕಿ ಪೋಷಕರು

ಪ್ರಕರಣ ವಾದ-ಪ್ರತಿವಾದ ಆಲಿಸಿ ಆರೋಪಿಗೆ ಗಲ್ಲು ಶಿಕ್ಷೆ ‌ವಿಧಿಸಿ ಮಹತ್ವದ ‌ತೀರ್ಪು ಸರ್ಕಾರದ ‌ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ ಪಾಟೀಲ ವಕಾಲತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಿ.ಎಂ.ಪುಷ್ಪಲತಾ ಇಂದು ತೀರ್ಪು ಪ್ರಕಟಿಸಿದ್ದಾರೆ. 25 ಸಾಕ್ಷ್ಯಗಳು, 52 ದಾಖಲೆಗಳು ಹಾಗೂ 8 ಮುದ್ದೆಮಾಲುಗಳನ್ನು ನ್ಯಾಯಾಧೀಶರು ಪರಿಗಣಿಸಿದ್ದಾರೆ.

ಬಾಲಕಿಯ ಪಾಲಕರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ 3 ಲಕ್ಷ ರೂ. ಪರಿಹಾರ ಪಡೆಯಲು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ.ಪಾಟೀಲ ವಾದ ಮಂಡಿಸಿದ್ದಾರೆ.