ಉ.ಕ ಸುದ್ದಿಜಾಲ ಬೆಳಗಾವಿ :
ಅಕ್ಟೋಬರ್ 4 ರಿಂದ ಡಿಸಿಸಿ ಬ್ಯಾಂಕ್ ಚುನಾವಣೆ ನಾಮಪತ್ರ ಸಲ್ಲಿಕೆ ಆರಂಭವಾಗುತ್ತದೆ. ಸಾಧ್ಯವಾದಷ್ಟು ಅನ್ ಅಪೋಸ್ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ಆಗದಿದ್ದರೂ ಚುನಾವಣೆ ಮಾಡಲಾಗುವುದು. ಬಹುಮತ ನಮ್ಮದೇ ಆಗಿರುತ್ತದೆ. ಬಹುಮತಕ್ಕೆ 9 ಸ್ಥಾನಗಳು ಬೇಕು ಆದರೂ ನಾವು 12 ಸ್ಥಾನ ಗೆದ್ದು ಡಿಸಿಸಿ ಬ್ಯಾಂಕ್ ಕಬ್ಜ ಮಾಡಿಕೊಳ್ಳುತ್ತೇವೆ ಎಂದು ಬೆಳಗಾವಿಯಲ್ಲಿ ಶಾಸಕ ಹಾಗೂ KMF ಅಧ್ಯಕ್ಷ ಬಾಲಚಂದ್ರ ಹೇಳಿಕೆ ನೀಡಿದ್ದಾರೆ.
ಈ ಸಲದ ಡಿಸಿಸಿ ಬ್ಯಾಂಕ್ ಬಹಳ ಅತೀರೇಖಕ್ಕೆ ಹೋಗುತ್ತಿರುವ ವಿಚಾರ. ಈ ರೀತಿ ಡಿಸಿಸಿ ಬ್ಯಾಂಕ್ ಚುನಾವಣೆ ಆಗಬಾರದಿತ್ತು. ಈ ಮೊದಲು ಹಿರಿಯರು ತೀರ್ಮಾಣ ಮಾಡಿ ಅನ್ ಅಪೋಸ್ ಮಾಡಿ ಚುನಾವಣೆ ಮಾಡುತ್ತಿದ್ದರೂ. ಇವಾಗ ಎಲ್ಲರಿಗೂ ಡಿಸಿಸಿ ಬ್ಯಾಂಕ್ ಚುನಾವಣೆ ನಿಲ್ಲಬೇಕು ಅಂತ ಆಸೆ ಬಂದಿದೆ.
ಸಹಕಾರ ಕ್ಷೇತ್ರದಲ್ಲಿ ರಾಜಕಾರಣ ಇರಬಾರದು ಆದ್ರೆ ರಾಜಕಾರಣ ಬಂದು ಎಲ್ಲವೂ ಕೆಡುತ್ತಿದೆ. ಹುಕ್ಕೇರಿ,ಕಿತ್ತೂರು, ರಾಮದುರ್ಗ ಸಮಾದಾನದಿಂದ ಚುನಾವಣೆ ನಡೆಯಬೇಕು. ಯಾರ ಮೇಲೆ ಪ್ರೀತಿ ಇರುತ್ತೇ ಅವರು ಗೆಲ್ಲುತ್ತಾರೆ.
ರಮೇಶ್ ಕತ್ತಿ ಚುನಾವಣೆ ಭಾಷಣದಲ್ಲಿ ಹೇಳಿಕೆ ವಿಚಾರ. ರಮೇಶ್ ಕತ್ತಿ ಹೇಳಿಕೆಯನ್ನ ಗಮನಿಸಿದ್ದೇನೆ. ಅವರಿಗೆ ಉತ್ತರವನ್ನ ನಾನು ಹುಕ್ಕೇರಿ, ಸಂಕೇಶ್ವರ ಭಾಗದಲ್ಲಿ ನೀಡುವೆ ಎಂದ ಬಾಲಚಂದ್ರ. ಪ್ರಜಾಪ್ರಭುತ್ವ ಎಲ್ಲರಿಗೂ ಮಾತನಾಡುವ ಹಕ್ಕಿದೆ ಮಾತನಾಡಲಿ. ನಾವು ಜಗಳ ಮಾಡುವುದಿಲ್ಲ, ಸಮಾನದಿಂದಲೇ ಉತ್ತರ ನೀಡುತ್ತೇವೆ.
ಚುನಾವಣೆ ಬಂದಾಗ ಎಲ್ಲ ಸರ್ಕಸ್ ನಾಟಕ ಇದ್ದೇ ಇರುತ್ತವೇ ಜನ ಎಲ್ಲದಕ್ಕೂ ಚಪ್ಪಾಳೆ ತಟ್ಟುತ್ತಾರೆ. ಹುಕ್ಕೇರಿ ಚುನಾವಣೆ ಫೈಟ್ ಇದೆ ನೋಡೊಣ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಪ್ರಚಾರ ಮಾಡುತ್ತಿದ್ದಾರೆ ಅವರು ಎನು ಅಂದರೂ ತಲೆ ಕೆಡಿಸಿಕೊಳ್ಳೋದಿಲ್ಲ ಸಮಾನದಿಂದ ಚುನಾವಣೆ ಮಾಡುತ್ತೇವೆ. ರಾಜಕಾರಣದಲ್ಲಿ ತಂತ್ರಗಾರಿಕೆಯನ್ನ ಅವರು ಮಾಡುತ್ತಾರೆ ನಾವು ಮಾಡುತ್ತೇವೆ. ಮತದಾರರ ನಿರ್ಣಣವೇ ಅಂತಿಮ ಅವರೇ ಚುನಾವಣೆ ನಿರ್ಧರಿಸುತ್ತಾರೆ.
ಲಕ್ಷ್ಮಣ ಸವದಿ ಬೆಂಬಲ ನಿಮಗೆ ಇದೆ ಎಂಬ ವಿಚಾರ. ಈಗಾಗಲೇ ನಾವು ಅಥಣಿ,ಕಾಗವಾಡ ಚುನಾವಣೆ ಮಾಡುವುದಿಲ್ಲ ಅಂತ ಸ್ಪಷ್ಟ ಪಡಿಸಿದ್ದೇವೆ. ನಾವು ಅಥಣಿ, ಚಿಕ್ಕೋಡಿ, ಕಾಗವಾಡದಲ್ಲಿ ಕೈ ಹಾಕಿಲ್ಲ. ಆ ಕ್ಷೇತ್ರದಲ್ಲಿ ಅನ್ ಅಪೋಸ್ ಮಾಡುವುದು ಅವರಿಗೆ ಬಿಟ್ಟ ವಿಚಾರವೆಂದ ಬಾಲಚಂದ್ರ ಜಾರಕಿಹೊಳಿ.
ಈ ಬಾರಿ ಡಿಸಿಸಿ ಬ್ಯಾಂಕ ನಮ್ಮ ಕಬಜ್ಜಾ – ಬಾಲಚಂದ್ರ ಜಾರಕಿಹೋಳಿ ಹೀಗಂದಿದೇಕೆ?
