ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿ ಎಸ್ಪಿ ಕಚೇರಿಯಲ್ಲಿ ನೂತನ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ಕೆ.ರಾಮರಾಜನ್. ಕೊಡುಗು ಜಿಲ್ಲಾ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದ ಕೆ ರಾಮರಾಜನ್. ಸಿಐಡಿ ಡಿಐಜಿಪಿಯಾಗಿ ವರ್ಗಾವಣೆಗೊಂಡ ಹಿಂದಿನ ಎಸ್ಪಿ ಡಾ.ಭೀಮಾಶಂಕರ ಗುಳೇದ್ ಸ್ಥಾನಕ್ಕೆ ಬಂದ ಕೆ ರಾಮರಾಜನ್.
ಮಾಧ್ಯಮಗಳಿಗೆ ನೂತನ ಎಸ್ಪಿ ಕೆ ರಾಮರಾಜನ್ ಪ್ರತಿಕ್ರಿಯೆ, ಸರ್ಕಾರ ನನಗೆ ದೊಡ್ಡ ಜವಾಬ್ದಾರಿ ಕೊಟ್ಟಿದೆ. ಐಪಿಎಸ್ ತರಬೇತಿ ಅವಧಿಯಲ್ಲಿ ಐದು ದಿನಗಳ ಕಾಲ ಬೆಳಗಾವಿಯಲ್ಲಿ ಕಳೆದಿದ್ದೇನೆ. ನನ್ನ ಟೀಮ್ ಜೊತೆಗೆ ನಾನು ಜನಸ್ನೇಹಿಯಾಗಿ ಕೆಲಸ ಮಾಡುತ್ತೇನೆ.
ಜನರ ಜೊತೆಗೆ ಮಾತನಾಡಿ ಸಮಸ್ಯೆಗಳ ಆಧಾರದ ಮೇಲೆ ಸೇವೆ ಸಲ್ಲಿಸುತ್ತೇನೆ. ನಮ್ಮ ಆಫೀಸ್ ಗೆ ನ್ಯಾಯಕ್ಕಾಗಿ ಬರೋರು ನೇರವಾಗಿ ನನ್ನನ್ನು ಸಂಪರ್ಕಿಸಿ. ನ್ಯಾಯ ಕೊಡುವ ಉದ್ದೇಶದಿಂದ ಕೆಲಸ ಮಾಡುತ್ತೇನೆ.
ನ್ಯಾಯಕ್ಕಾಗಿ ಬರೋರಿಗೆ ಉಚಿತ ಎಫ್ಐಆರ್ ದಾಖಲಿಸಲು ಅವಕಾಶ ಇದೆ. ಯಾವುದೇ ಕಾರಣಕ್ಕೂ ರಾಜೀ ಸಂಧಾನಕ್ಕೆ ಅವಕಾಶ ಕೊಡೊದಿಲ್ಲ. ಎಫ್ಐಆರ್ ಮಾಡದೇ ರಾಜೀ ಪಂಚಾಯತ್ ನನ್ನ ಅವಧಿಯಲ್ಲಿ ಅದಕ್ಕೆ ಅವಕಾಶವಿಲ್ಲ. ಕಾನೂನು ಎಲ್ಲರಿಗೂ ಒಂದೇ. ಪೊಲೀಸರನ್ನ ನೋಡಿ ಯಾರು ಭಯ ಪಡಬಾರದು. ಕಾನೂನಿನ ಭಯ ಇರಬೇಕು ಜನರಿಗೆ ಕಾನೂನು ರೀತಿ ಭಯ ಇರಬೇಕು.
ಸವದತ್ತಿ ಯಲ್ಲಮ್ಮನ ಜಾತ್ರೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತೇನೆ. ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಅಕ್ರಮ ಸಾರಾಯಿ ಮಾರಾಟ ವಿಚಾರ. ಎರಡ್ಮೂರು ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಜನಸ್ನೇಹಿ ಕೆಲಸಕ್ಕೆ ಹೆಚ್ಚಿನ ಒತ್ತು ಕೊಡುತ್ತೇನೆ ಎಂದ ಎಸ್ಪಿ ರಾಮರಾಜನ್.
ಬೆಳಗಾವಿ ನೂತನ ಎಸ್ಪಿಯಾಗಿ ಕೆ ರಾಮರಾಜನ್ ಅಧಿಕಾರ ಸ್ವೀಕಾರ – ಖಡಕ ಆದೇಶ


