ಉ.ಕ ಸುದ್ದಿಜಾಲ ವಿಜಯಪುರ :
ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಹಿಂಬದಿ ಬೈಕ್ ಡಿಕ್ಕಿ. ಓರ್ವ ಬೈಕ್ ಸವಾರ ರಸ್ತೆ ಮೇಲೆಯೇ ಜೀವನ್ಮರಣದ ಮಧ್ಯೆ ನರಳಾಟ. ಮತ್ತೋರ್ವ ಬೈಕ್ ಸವಾರನಿಗೂ ಗಾಯ. ಆಂಬ್ಯುಲೆನ್ಸ್ ಗೆ ಅಪಘಾತ ಮಾಹಿತಿ ನೀಡಿ ಒಂದು ಗಂಟೆ ಕಳೆದರೂ ಸ್ಥಳಕ್ಕೆ ಬಾರದ ಆಂಬ್ಯುಲೆನ್ಸ್.
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ರತ್ನಾಪುರ ಕ್ರಾಸ್ ಬಳಿ ಘಟನೆ. ಘಟನಾ ಸ್ಥಳದಲ್ಲಿ ನರಳಾಟ ನೋಡುತ್ತಾ ನಿಂತ ಜನ. 30ವರ್ಷದ ದಾನಪ್ಪ ಹಡಪದ ಬೈಕ್ ಸವಾರ ಜೀವನ್ಮರಣದ ಮಧ್ಯೆ ನರಳಾಟ..
38ವರ್ಷದ ಸೋಮು ಕನಮಡಿ ಎಂಬಾತನಿಗೂ ಗಾಯ. ತಿಕೋಟಾ ತಾಲೂಕಿನ ಓರ್ವ ಬಾಬಾನಗರ, ಮತ್ತೋರ್ವ ಸೋಮದೇವರಹಟ್ಟಿ ಗ್ರಾಮದವ. ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.