ಉ.ಕ ಸುದ್ದಿಜಾಲ ವಿಜಯಪುರ :

ಹಿಂದೂ ಧರ್ಮ ಹಾಗೂ ಲಿಂಗಾಯತ ಧರ್ಮ ಒಂದೇ ವಿಜಯಪುರದಲ್ಲಿ ಹರಿಹರ ಪಂಚಮಸಾಲಿ ಪೀಠದ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

ಹಿಂದೂ ಧರ್ಮ ಬೇರೆ ಲಿಂಗಾಯತ ಧರ್ಮ ಬೇರೆ ಎಂಬ ವಿಚಾರದ ಕುರಿತು ಹೇಳಿಕೆ. ಜ್ಞಾನಯೋಗಾಶ್ರಮದಲ್ಲಿನ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಹೇಳಿಕೆ ನೀಡೊದ ಶ್ರೀಗಳು ನಾವೆಲ್ಲಾ ಹಿಂದೂಗಳೇ, ಹಿಂದೂ ಎಂಬುದು ಮಹಾಸಾಗರ. ಮಹಾಸಾಗರದಲ್ಲಿ ಅನೇಕ ನದಿಗಳು ವಿಲೀನವಾಗಿವೆ.

ಹಿಂದೂ ಧರ್ಮದಲ್ಲಿ ಭೌದ್ದ, ಜೈನ್, ಶಿಖ್, ವೀರಶೈವ ಲಿಂಗಾಯತ ವೈಷ್ಟವ ಎಂಬ ನದಿಗಳು. ಶಂಕರಾಚಾರ್ಯರು, ಮದ್ವಾಚಾರ್ಯರು, ರಾಮಾನುಜಾಚಾರ್ಯ ಗುರುನಾನಕರು, ಜ್ಞಾನೇಶ್ವರ ಬಸವಣ್ಣನವರು ಆಯಾ ಕಾಲ ಘಟ್ಟದಲ್ಲಿ ಅವರ ವಿಚಾರಧಾರೆ ಹೇಳಿದರು.

ಅವು ಧರ್ಮಗಳಾದವು ಎಂದು ವಚನಾನಂದ ಸ್ವಾಮೀಜಿ. ಕರ್ನಾಟಕದಲ್ಲಿ 12 ನೇ ಶತಮಾನದಲ್ಲಿ ಬಸವಣ್ಣ ಜಗತ್ತಿಗೆ ಹೊಸದನ್ನು ಕೊಟ್ಟರು. ಬಸವಣ್ಣನವರ ವಿಚಾರಗಳನ್ನು ಸೀಮಿತ ಮಾಡಬಾರದು.

ಯಾವುದೇ ಮಹಾನ್ ವ್ಯಕ್ತಿಗಳ ಅನುಕರಣೆ ಮಾಡುವವರನ್ನು ಟೀಕೆ ಮಾಡಬಾರದು. ನಾವೇ ಶ್ರೇಷ್ಟ ಎಂದು ಟೀಕಿಸಬಾರದು. ಒಂದು ಧರ್ಮದ ಆಚರಣೆಗಳನ್ನು ಕೀಳಾಗಿ ಕಾಣುವುದು ಒಳಿತಲ್ಲ..

ಮತ್ತೊಂದು ತತ್ವಗಳನ್ನು ತುಚ್ಛವಾಗಿ ಕಾಣಬಾರದು. ಎಲ್ಲವೂ ಒಂದೇ ಎಂದ ಸ್ವಾಮೀಜಿ. ಈ ಮೂಲಕ ಹಿಂದೂ ಹಾಗೂ ಲಿಂಗಾಯತ ಧರ್ಮ ಎರಡೂ ಒಂದೇ ಎಂದು ಸ್ಪಷ್ಟನೆ ನೀಡಿದ್ದಾರೆ.