ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿಯಲ್ಲಿ ಹೃದಯಾಘಾತದಿಂದ ವಿಚಾರಣಾಧೀನ ಕೈದಿ ಸಾವು ಬೆಳಗಾವಿ ತಾಲೂಕಿನ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾಗಲೇ ಹೃದಯಾಘಾತದಿಂದ ಸಾವು . ಬೆಳಗಾವಿ ತಾಲೂಕಿನ ಹುದಲಿ ಗ್ರಾಮದ ಸಿದ್ದಪ್ಪ ಮುತ್ತೆಣ್ಣವರ (38) ಸಾವು.
ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಸಿದ್ದಪ್ಪ. ಮನೆಯ ಮುಂದೆ ಕೂಗು ಹಾಕಿದ್ದಕ್ಕೆ ಯುವಕನ ಕೊಲೆಗೈದು ಹಿಂಡಲಗಾ ಜೈಲು ಸೇರಿದ್ದ ಸಿದ್ದಪ್ಪ. ಬರ್ತಡೆ ಪಾರ್ಟಿ ಮುಗಿಸಿ ವಾಪಸ್ ಹೋಗುವಾಗ ಕೂಗು ಹಾಕಿದ್ದಕ್ಕೆ ಮುತ್ತಣ್ಣಗುಡಬಲಿ ಯವಕನ ಹತ್ಯೆ ಪ್ರಕರಣ ಆರೋಪಿ ಸಿದ್ದಪ್ಪ.
ಕೈ ನೋವು ಬಳಲುತ್ತಿದ್ದ ಹಿನ್ನೆಲೆ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ. ತಡರಾತ್ರಿ ಜಿಲ್ಲಾಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವು. ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿ ಬೀಮ್ಸ್ ಶವಗಾರಕ್ಕೆ ರವಾನೆ. ಎಪಿಎಂಸಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ಬೆಳಗಾವಿಯಲ್ಲಿ ಹೃದಯಾಘಾತದಿಂದ ವಿಚಾರಣಾಧೀನ ಕೈದಿ ಸಾವು
