ಉ.ಕ ಸುದ್ದಿಜಾಲ ಅಥಣಿ :
ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ ಈಗಾಗಲೇ ಬೊಮ್ಮಾಯಿ ಅವರಿಂದ ಭರ್ತಿಯಾಗಿದೆ. ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅಸ್ಥಿತ್ವದಲ್ಲಿದ್ದು ಜನಪರ ಕಾರ್ಯಗಳನ್ನು ಮಾಡುತ್ತಿದೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಾಡುತ್ತೇವೆ ಎಂದು ಅರಣ್ಯ ಹಾಗೂ ಆಹಾರ ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ ಕತ್ತಿ ಹೇಳಿದರು.
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಲಕ್ಷ್ಮೀ ಸಸ್ಯೋಧ್ಯಾನದ ಉದ್ಘಾಟನೆ ನೆರವೇರಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಉಮೇಶ ಕತ್ತಿ ಅವರು ಯತ್ನಾಳ್ ಹೇಳಿಕೆ ಅವರ ವೈಯಕ್ತಿಕ ವಿಚಾರ ಇದೇ ವೇಳೆ ಪಡೀತರದಾರರಿಗೆ ಅಕ್ಕಿ ಬದಲಾಗಿ ಜೋಳ ಅಥವಾ ರಾಗಿಯನ್ನು ಬೇಡಿಕೆಗಳಿಗುಣವಾಗಿ ಶೀಘ್ರದಲ್ಲೇ ವಿತರಿಸುತ್ತೇವೆ ಎಂದು ಪಡೀತರ ದಾರರಿಗೆ ಸಿಹಿ ಸುದ್ದಿ ನೀಡಿದರು. ಅಲ್ಲದೆ ಅಥಣಿ ಜಿಲ್ಲೆಯ ಬಗ್ಗೆ ಈಗಾಗಲೇ ನಮ್ಮೆಲ್ಲರ ಆಶಯವೂ ಆಗಿದೆ ಬೆಳಗಾವಿಯಲ್ಲಿ ಚಿಕ್ಕೋಡಿ, ಅಥಣಿಗಳು ಜಿಲ್ಲೆಗಳಾಗಬೇಕೆಂಬುದು ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ ಎಂದರು.
ಮಾಸ್ಕ್ ಬಳಸದ ಕುರಿತು ಮಾಧ್ಯಮಗಳ ಪ್ರಶ್ನೆಗೆ ತಮ್ಮದೇ ಆದ ಧಾಟಿಯಲ್ಲಿ ಹೇಳಿದ ಸಚಿವ ಕತ್ತಿ ಪ್ರಧಾನಿ ಮಾಸ್ಕ್ ಬಳಸಬೇಡಿ ಅಂತ ಹೇಳಿದ್ದಾರೆ ಅದಕ್ಕೆ ನಾನು ಬಳಸಲ್ಲ ಎಂದು ಹೇಳುವ ಮೂಲಕ ಜವಾಬ್ದಾರಿ ಸ್ಥಾನದಲ್ಲಿರುವ ಕತ್ತಿ ಹೊಸ ವರಸೆ ಶುರುಮಾಡಿದ್ದಾರೆ.