ಉ.ಕ ಸುದ್ದಿಜಾಲ ಅಥಣಿ :
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಗುಡಿಸಲಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿಯಾಗಿದ್ದು ಕೋಳಿ ಸಹಿತ ದವಸ ಧಾನ್ಯ ಸುಟ್ಟು ಕರಕಲಾಗಿವೆ.
ಬೆಳಗಾವಿ ಜಿಲ್ಲೆಯ ಇಂಡಿಅಥಣಿ ತಾಲೂಕಿನ ಫಡತರವಾಡಿ ಗ್ರಾಮದ ಮಹಾದೇವ ದೇವಖಾತೆ ಎಂಬುವವರ ಗುಡಿಸಲಿಗೆ ನಿನ್ನೆ ರಾತ್ರಿ 8 ಘಂಟೆ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ ತಕ್ಷಣ ಸ್ಥಳೀಯರ ಮಾಹಿತಿ ಮೆರೆಗೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.
ಬೆಂಕಿ ಅನಾಹುತದಲ್ಲಿ ನಗದು ಸಹಿತ ಬಹುತೇಕ ವಸ್ತುಗಳು ನಾಶವಾಗಿವೆ. ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಪ್ರಾಣ ಹಾನಿಯ ಬಗ್ಗೆ ಯಾವುದೆ ವರದಿಯಾಗಿಲ್ಲ.
ಗುಡಿಸಲಿಗೆ ಬೆಂಕಿ, ಅಪಾರ ಹಾನಿ – ಸುಟ್ಟು ಕರಕಲಾದ ದುಡ್ಡು
