ಉ.ಕ ಸುದ್ದಿಜಾಲ ಬೆಳಗಾವಿ :
ಮಳೆಯ ಅವಾಂತರಕ್ಕೆ ಬೆಳಗಾವಿಯಲ್ಲಿ ಮತ್ತೊಂದು ಬಲಿ, ನಿರಂತರ ಮಳೆಯ ಪರಿಣಾಮ ಮನೆ ಗೋಡೆ ಕುಸಿದು ಮೂರು ವರ್ಷದ ಬಾಲಕಿ ಸಾವು ಬೆಳಗಾವಿಯ ಗೋಕಾಕ ನಗರದ ಮಹಾಲಿಂಗೇಶ್ವರ ನಗರದಲ್ಲಿ ದುರ್ಘಟನೆ.
ಮಹಾಲಿಂಗೇಶ್ವರ ನಗರದ ಕೀರ್ತಿಕಾ ನಾಗೇಶ ಪೂಜಾರಿ (3) ಗೋಡೆ ಕುಸಿದು ಬಲಿ ಘಟನೆಯಲ್ಲಿ ಕೀರ್ತಿಕಾ ತಾಯಿ ರೇಷ್ಮಾ, ಸಹೋದರು ಖುಷಿಗೂ ಗಂಭೀರ ಗಾಯ, ಮನೆಯಲ್ಲಿ ಮಲಗಿದ್ದಾಗ ಪಕ್ಕದ ಮನೆಯ ಗೋಡೆ ನಾಗೇಶ ಪೂಜಾರಿ ಮನೆ ಮೇಲೆ ಬಿದ್ದು ಅವಘಡ
ಗಾಯಾಲುಗಳನ್ನು ಗೋಕಾಕ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ, ಕಳೆದ ವಾರವೂ ಗೋಕಾಕ ನಗರದ ವ್ಯಕ್ತಿಯೋರ್ವ ಚರಂಡಿಯಲ್ಲಿ ಕೊಚ್ಚಿಕೊಂಡು ಹೋಗಿ ಸಾವು ಈಗ ಗೋಕಾಕ ನಗರದಲ್ಲಿ ಮಹಾ ಮಳೆಗೆ ಎರಡನೇ ಬಲಿ.
ಸ್ಥಳಕ್ಕೆ ನಗರಸಭೆ ಅಧಿಕಾರಿಗಳು, ತಾಲೂಕಾಡಳಿತದ ಅಧಿಕಾರಿಗಳು ಭೇಟಿ, ಪರಿಶೀಲನೆ ಗೋಕಾಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.
ಮಳೆಯ ಅವಾಂತರಕ್ಕೆ ಬೆಳಗಾವಿಯಲ್ಲಿ ಮತ್ತೊಂದು ಬಲಿ
