ಉ.ಕ ಸುದ್ದಿಜಾಲ ಹುಕ್ಕೇರಿ :
ಶ್ರೀ ರಾಮುಲು ಅವರನ್ನ ಕಾಂಗ್ರೆಸ್ ಕರೆ ತರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಬೆಳಗಾವಿ ಜಿಲ್ಲೆಯಹುಕ್ಕೇರಿ ಪಟ್ಟಣದಲ್ಲಿ ಅಂಬೇಡ್ಕರ ಪ್ರತಿಮೆ ಅನಾವರಣ ಬಳಿಕ ಹೇಳಿಕೆ ಸಚಿವ ಸತೀಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಶ್ರೀರಾಮಲು ಕಾಂಗ್ರೆಸ್ ಸೇರುವ ಬಗ್ಗೆ ಸಚಿವ ಸತೀಶ ಜಾರಕಿಹೋಳಿ ಹೇಳಿದ್ದೇನು
ಡಿಕೆಶಿ ಶ್ರೀರಾಮುಲು ಅವರನ್ನ ಸಂಪರ್ಕ ಮಾಡಿದ್ದು ನನಗೆ ಗೊತ್ತಿಲ್ಲ. ನಾನು ಸಿಎಂ ಆಗುತ್ತೇನೆ ಎಂದು ಹೇಳಿಲ್ಲ ನಾನು ಸಿಎಂ ಅಭ್ಯರ್ಥಿ ಎಂದು ಹೇಳಿದ್ದೇನೆ. ಸಿಎಂ ಮಾಡುವದು ಬಿಡುವದು ಹೈ ಕಮಾಂಡ್ ಜವಾಬ್ದಾರಿ ಸರಕಾರದ ಅಧಿಕಾರಕ್ಕೆ ತರಲು ಎಲ್ಲರ ಪಾತ್ರ ಇದೆ ಅದರಲ್ಲಿ ನಾನು ಬಾಗೀದಾರ ಎಂದರು.
ಡಿಕೆಶಿ ಹಾಗೂ ನನ್ನ ನಡುವೆ ಯಾವುದೇ ಮುನಿಸಿಲ್ಲ ಎಲ್ಲರೂ ಸೇರಿ ಬೆಳಗಾವಿ ಸಮಾವೇಶ ಯಶಸ್ವಿ ಮಾಡಿದ್ದೇವೆ. ಡಿಕೆಶಿ ನಾನು ಒಗ್ಗಟ್ಟಾಗಿ ಇದ್ದೇವೆ. ರಾಜ್ಯಾಧ್ಯಕ್ಷ ಬದಲಾವಣೆ ವಿಚಾರವನ್ನ ದೆಹಲಿಯಲ್ಲಿ ಕೇಳಬೇಕು ಎಂದ ಸತೀಶ ಜಾರಕಿಹೋಳಿ.
ರಾಜ್ಯಾಧ್ಯಕ್ಷ ಬದಲಾವಣೆ ಮಾಡುವಷ್ಟು ನಮ್ಮ ಬಳಿ ಶಕ್ತಿಯಿಲ್ಲ ಅಧಿಕಾರ ಇಲ್ಲ ಚರ್ಚೆ ಅನವಶ್ಯಕ ಶ್ರೀರಾಮುಲು ಪಕ್ಷಕ್ಕೆ ಬರುತ್ತಾರೆ ಎನ್ನುವದು ವದಂತಿ ಅಷ್ಟೇ ಶ್ರೀರಾಮುಲು ಪಕ್ಷದ ಸಿದ್ದಾಂತ ಒಪ್ಪಿ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸ್ವಾಗತ ಮಾಡುತ್ತೇನೆ ಎಂದರು.
ಶ್ರೀರಾಮುಲು ಪಕ್ಷಕ್ಕೆ ಬರಲು ನನ್ನ ವಿರೋಧವಿಲ್ಲ. ವಿರೋಧ ಬಗ್ಗೆ ಮಾತಾಡಿದ್ರೆ ಹೈ ಕಮಾಂಡ್ ನೊಟೀಸ್ ನೀಡುತ್ತೆ ಅವಾಗ ನಾನು ಉತ್ತರ ನೀಡಬೇಕಾಗುತ್ತೆ ಎಂದು ಸತೀಶ ಜಾರಕಿಹೋಳಿ.