ಉ.ಕ ಸುದ್ದಿಜಾಲ ಯಮಕನಮರಡಿ :

ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೋಲಿಸರ ಕಾರ್ಯಾಚರಣೆಯಿಂದ ಸೋಮವಾರ ರಾತ್ರಿ ಹುಕ್ಕೇರಿ ತಾಲೂಕಿನ ಹೂನೂರ ಗ್ರಾಮದ ರಸ್ತೆ ಬದಿಯಲ್ಲಿ ಜೂಜಾಡುತ್ತಿರುವ ಕರಗುಪ್ಪಿ ಗ್ರಾಮದ 13 ಜನರನ್ನು ಬಂಧಿಸಿದ್ದಾರೆ.

ರಾಜಾರೋಷವಾಗಿ ಬೀದಿ ದೀಪದ ಕೆಳಗೆ ಇಸ್ಪೀಟ ಆಡುತ್ತಿದ್ದ ಸುದ್ದಿ ತಿಳಿದ ಯಮಕನಮರಡಿ ಪೋಲಿಸ್ ಇನ್ಸಪೇಕ್ಟರ ಜಾವೇದ ಮುಷಾಫೀರ ಮತ್ತು ಅವರ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ

ಇಸ್ಪಿಟ ಆಡುತ್ತಿದ್ದ ಕರಗುಪ್ಪಿ ಗ್ರಾಮದವರಾದ ಲಗಮಾ ಜೋರ್ಲಿ, ಮನೋಜ ಪುಂಡೆ, ಸತ್ಯಪ್ಪಾ ಜೋರ್ಲಿ, ರಮೇಶ ನಾಯಿಕ, ಅಜೇಯ ಪೂಜೇರಿ, ಭೀಮಪ್ಪಾ ಗುಟಗುದ್ದಿ, ಮಾರುತಿ ಜೋರ್ಲಿ, ಆನಂದ ಜಡಗಿ, ಮಂಜುನಾಥ ಮ್ಯಾಕಳಿ, ಹೋಳೆಪ್ಪಾ ಮಗೆನ್ನವರ, ಲಗಮನ್ನಾ ಪೂಜೇರಿ, ಪ್ರಭು ಮಗೆನ್ನವರ, ಸುರೇಶ ಮಾಳಗಿ ಎಂಬುವವರನ್ನು ಬಂಧಿಸಿದ್ದಾರೆ.

ಬಂಧಿತರಿಂದ 23,200 ರೂಪಾಯಿ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ಯಮಕನಮರಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.