ಉ.ಕ ಸುದ್ದಿಜಾಲ ಕಾಗವಾಡ :

ಗೋಕಾಕ ಶಾಸಕ ರಮೇಶ ಜಾರಕಿಹೋಳಿಗೆ ಟಾಂಗ್ ನೀಡಿದ ಕಾಗವಾಡ ಶಾಸಕ ರಾಜು ಕಾಗೆ ಬಿಜೆಪಿಯ 20 ಜನ ಶಾಸಕರ ಬರ್ತಾರೆ ಅವರನ್ನು ತೆಗೆದುಕೊಂಡು ನಾವು ಪಾರ್ಲಿಮೆಂಟ್ ಚುನಾವಣೆ ಮಾಡ್ತಿವಿ. ರಮೇಶ್ ಜಾರಕಿಹೊಳಿ ಅವರಿಗೆ ಮಾಡೋಕ್ಕೆ ಕೆಲಸ ಇಲ್ಲಾ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸೊದ ಅವರು, 20 ಜನ ಶಾಸಕರ ಬರ್ತಾರೆ ಅವರನ್ನು ತೆಗೆದುಕೊಂಡು ನಾವು ಪಾರ್ಲಿಮೆಂಟ್ ಚುನಾವಣೆ ಮಾಡ್ತಿವಿ. ಅದಕ್ಕಾಗಿ ನಮ್ಮ ಪಕ್ಷದಲ್ಲಿ ಅತೃಪ್ತ ಶಾಸಕರ ಇದ್ದಾರೆ ಎಂದು ಹೇಳ್ತಾರೆ ಎಂದು ಜಾರಕಿಹೊಳಿಗೆ ಟಾಂಗ್ ನೀಡಿದ್ದಾರೆ.

ನಮ್ಮ  ಪಕ್ಷದ ಶಾಸಕರಲ್ಲಿ ಭಿನ್ನಾಭಿಪ್ರಾಯ ಇಲ್ಲ. ಈಗಾಗಲೇ 20 ಜನ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ ಅವರನ್ನು ತೆಗೆದುಕೊಂಡು ನಾವು ಲೋಕಸಭಾ ಚುನಾವಣೆ ಮಾಡ್ತಿವಿ ನಿನ್ನೆ ಬಿಜೆಪಿ ಪಕ್ಷ ಕಾಂಗ್ರೆಸ್ ನಲ್ಲಿರುವ ಒಳಜಗಳ ಪಟ್ಟಿ ಬಿಡುಗಡೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ರಮೇಶ ಜಾರಕಿಹೋಳಿಗೆ ಟಾಂಗ್ ನೀಡಿದ ಶಾಸಕ ರಾಜು ಕಾಗೆ

ಮಾಧ್ಯಮಗಳ ಮೇಲೇನೆ ಗೂಬೆ ಕುರಿಸಿದ ಶಾಸಕ‌ ರಾಜು ಕಾಗೆ, ನಮ್ಮಲ್ಲಿ ಯಾವುದೇ ಒಳ ಜಗಳವಿಲ್ಲ 135 ಜನ ಶಾಸಕರು ನಾವೇಲ್ಲರೂ ಒಂದೇ ಕರ್ನಾಟಕ ರಾಜ್ಯದಲ್ಲಿ ಒಳ್ಳೆಯ ಆಡಳಿತ ಮಾಡ್ತಿವಿ ಎಂದಿದ್ದಾರೆ.