ಉ.ಕ ಸುದ್ದಿಜಾಲ ಮೈಸೂರು :

ಒಬ್ಬೊಬ್ಬ ಶಾಸಕನಿಗೆ 50 ಕೋಟಿ ರೂಪಾಯಿ ಆಫರ್​. ಈ ಕೋಟಿಗಳ ಲೆಕ್ಕವೇ ರಾಜ್ಯ ರಾಜಕೀಯದಲ್ಲಿ ದಂಗು ಬಡಿಸುತ್ತಿದೆ. ಅಂದ್ಹಾಗೆ ಸಿದ್ದರಾಮಯ್ಯ ಸರ್ಕಾರ ಕೆಡವಲು ಬಿಗ್​​ ಆಪರೇಷನ್ ​ ನಡೆಯುತ್ತಿದೆ. ಸರ್ಕಾರದ ಪತನದ ಬಗ್ಗೆ ಸ್ವತಃ ಸಿಎಂ ಅಪ್​ಡೇಟ್​ ಬಾಂಬ್​​ ಸಿಡಿಸಿದ್ದಾರೆ.

ಐವತ್ತು ಶಾಸಕರಿಗೆ 50 ಕೋಟಿ ಆಫರ್ ನೀಡಿದ್ದಾರೆ!

ಸಿದ್ದರಾಮಯ್ಯ ಸರ್ಕಾರ 5 ವರ್ಷ ಅಧಿಕಾರ ಪೂರ್ಣ ಮಾಡಲ್ವಾ?. ರಾಜ್ಯದಲ್ಲಿ ಆಪರೇಷನ್​ ಕಮಲ ಸದ್ದಿಲ್ಲದೇ ನಡೀತಿದ್ಯಾ? ಬಿಜೆಪಿ ಹಿಂಬಾಗಿಲ ರಾಜಕಾರಣಕ್ಕೆ ಪ್ಲಾನ್​ ರೂಪಿಸ್ತಿದ್ಯಾ? ಈ ಪ್ರಶ್ನೆಗಳು ಹುಟ್ಟಲು ಕಾರಣ ಮೈಸೂರಲ್ಲಿ ಸಿದ್ದರಾಮಯ್ಯ ಆಡಿದ ಅದೊಂದು ಮಾತು. 50 ಶಾಸಕರ ಜೊತೆ ಸಂಪರ್ಕ ಕ್ರಾಂತಿ ನಡೆದಿದ್ದು, ಒಬ್ಬೊಬ್ಬ ಶಾಸಕನಿಗೆ 50 ಕೋಟಿ ಆಫರ್​​ ಮಾಡಲಾಗಿದೆಯಂತೆ.

‘ಒಬ್ಬೊಬ್ಬ ಶಾಸಕನಿಗೆ 50 ಕೋಟಿ ಆಫರ್​’

ಈ ಸಲ ಹೇಗದರೂ ಮಾಡಿ ಸಿದ್ದರಾಮಯ್ಯ ಸರ್ಕಾರ ಕಿತ್ತು ಹಾಕಬೇಕೆಂದು ಒಬ್ಬೊಬ್ಬ ಎಂಎಲ್​ಎಗೆ 50 ಕೋಟಿ ರೂಪಾಯಿ ಆಫರ್ ಮಾಡಿದ್ದಾರೆ. 50 ಜನ ಎಂಎಲ್​​ಎಗಳಿಗೆ 50 ಕೋಟಿ ರೂಪಾಯಿ ಕೊಡುತ್ತೇವೆ ಎಂದಿದ್ದಾರೆ. ಇದಕ್ಕೆ ನಮ್ಮ ಎಂಎಲ್​ಎಗಳು ಯಾರೂ ಕೂಡ ಒಪ್ಪಲಿಲ್ಲ. ಹೆಂಗದರೂ ಮಾಡಿ ಸಿಎಂ ಸಿದ್ದರಾಮಯ್ಯಗೆ ಮಸಿ ಬಳಿದು, ಅಧಿಕಾರದಿಂದ ತೆಗೆದು ಹಾಕಲು ಸಜ್ಜಾಗಿದ್ದಾರೆ.

ಮೊನ್ನೆಯಷ್ಟೇ ಮಿನಿ ಸಮರದ ಕಣದಲ್ಲಿ ಕೇಂದ್ರ ಸಚಿವ ಸೋಮಣ್ಣ, ಸರ್ಕಾರ ಪತನದ ಭವಿಷ್ಯ ನುಡಿದಿದ್ದರು. ಇದಕ್ಕೆ ಹೆಚ್​​.ಡಿ ದೇವೇಗೌಡ್ರು ಸಹ ಧ್ವನಿಗೂಡಿಸಿದರು. ಈ ಬೆನ್ನಲ್ಲೆ ಸಿಎಂ ನೀಡಿದ ಹೇಳಿಕೆ ಸಂಚಲನ ಸೃಷ್ಟಿಸಿದೆ. ಅಂದ್ಹಾಗೆ, ಸೋಮಣ್ಣ ಮತ್ತು ಗೌಡ್ರು ಮೊನ್ನೆ ಹೇಳಿದ್ದೇನು?.

‘ಡಿಸೆಂಬರ್ ವೇಳೆ ಸರ್ಕಾರ ಇರಲ್ಲ’

ಡಿಸೆಂಬರ್​ ಒಳಗೆ ನಮ್ಮಪ್ಪನಾಣೆ ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಇರಲ್ಲ. ನಾವು ಯಾರೂ ಬೇಕಿಲ್ಲ. ಕಾಂಗ್ರೆಸ್​​ನವರೇ 23ನೇ ತಾರೀಖು ಸಂಜೆ ಯಾರು ಯಾರು ಯಾವ್ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಕೇಂದ್ರದ ಹೈಕಮಾಂಡ್ ಎಲ್ಲದಕ್ಕೂ ನೀವೇ ಹೊಣೆ ಅಂತಾರೆ.