ಉ.ಕ ಸುದ್ದಿಜಾಲ ರಾಯಬಾಗ :

ಸಾಲಗಾರರ ಕಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಕೂಲಿ ಕಾರ್ಮಿಕ. ಬೆಳಗಾವಿ ಜಿಲ್ಲೆಯ ರಾಯಬಾಗಬತಾಲೂಕಿನ ದಿಗ್ಗೇವಾಡಿ ಗ್ರಾಮದ ಅಪ್ಪಾಸಾಬ ಕಂಬಾರ ಆತ್ಮಹತ್ಯೆಗೆ ಶರಣು.

ಸಾಲಗಾರರ ಕಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಕೂಲಿ ಕಾರ್ಮಿಕ ವಿಡಿಯೋ ವೈರಲ್

ದಿಗ್ಗೇವಾಡಿ ಗ್ರಾಮದ ಕೂಲಿ ಕಾರ್ಮಿಕ ಆತ್ಮಹತ್ಯೆಗೂ ಮುನ್ನ ಸೆಲ್ಪಿ ವಿಡಿಯೋ ಮಾಡಿಟ್ಟು ನೇಣಿಗೆ ಶರಣಾಗಿದ್ದಾನೆ. ಖಾಸಗಿ ಕ್ರಶರ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಮೃತ ಅಪ್ಪಾಸಾಬ.ಬ ನನ್ನ ಸಾವಿಗೆ ಇಬ್ಬರೆ ಕಾರಣ ಬೇರೆ ಯಾರಿಗೂ ತೊಂದರೆ ನೀಡದಂತೆ ಮನವಿ ಮಾಡಿರುವ ಮೃತ ಅಪ್ಪಾಸಾಬ.

ರೇಖಾ ಸಮಗಾರ ಹಾಗೂ ಭೀಮು ವಾಳಕೆ ಹೆಸರು ಹೇಳಿ ಸೆಲ್ಪಿ ವಿಡಿಯೋ ಸದ್ಯ ವೈರಲ್ ಆಗಿದೆ. ಇಬ್ಬರಿಂದ ಅಂದಾಜು 50 ಸಾವಿರ ಸಾಲ ಪಡೆದಿದ್ದ ಅಪ್ಪಾಸಾಬ. 50 ಸಾವಿರಕ್ಕೆ ಪ್ರತಿಯಾಗಿ ಲಕ್ಷಾಂತರ ರೂಪಾಯಿ ಬಡ್ಡಿ ಕೊಟ್ಟಿದ್ದ ಅಪ್ಪಾಸಾಬ.

ಬಡ್ಡಿ ಹಣ ಕೊಟ್ಟರು ಇನ್ನು ಹಣ ನೀಡುವಂತೆ ಪೀಡಿಸುತ್ತಿದ್ದ ರೇಖಾ ಹಾಗೂ ಭೀಮು ಹೀಗಾಗಿ ಮನನೊಂದು ಕೂಲಿಕಾರ್ಮಿಕ ಅಪ್ಪಾಸಾಬ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸ್ಥಳಕ್ಕೆ ರಾಯಬಾಗ ಪೊಲೀಸರ ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದು ಇಬ್ಬರೂ ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸರು. ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.