ಉ.ಕ‌ ಸುದ್ದಿಜಾಲ ಬೆಳಗಾವಿ :

ಇನ್ಸೂರೇನ್ಸ್ ಹಣಕ್ಕಾಗಿ ಅಣ್ಣನ ಕೊಲೆ ಮಾಡಿದ್ದ ತಮ್ಮ ಹಾಗೂ ಗ್ಯಾಂಗ್ ಬಂಧನ 50 ಲಕ್ಷ ಇನ್ಸೂರೆನ್ಸ್ ಹಣಕ್ಕಾಗಿ ಒಡಹುಟ್ಟಿದ ಅಣ್ಣನನ್ನೇ ಕೊಲೆಗೈದ‌ ಪಾಪಿ ತಮ್ಮ ಮೃತನ ಶವ ಪತ್ತೆಯಾಗುತ್ತಿದ್ದಂತೆ ಊರು ಬಿಟ್ಟವರು ತಿಂಗಳ ಬಳಿಕ ಪೊಲೀಸರ ಖೆಡ್ಡಾಕ್ಕೆ.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದ‌ ಬಳಿ‌ ನಡೆದಿದ್ದ ಘಟನೆ ಹಣಮಂತ ಗೋಪಾಲ ತಳವಾರ(35) ಕೊಲೆಯಾಗಿದ್ದ ದುರ್ದೈವಿ ಬಸವರಾಜ ತಳವಾರ ತನ್ನ ಮೂವರು ಸ್ನೇಹಿತರ ಜೊತೆಗೂಡಿ ಅಣ್ಣನ ಹತ್ಯೆಗೈದ ಪಾಪಿ.

ಹಣಮಂತನ ಹೆಸರಲ್ಲಿ 50 ಲಕ್ಷ ಇನ್ಸೂರೆನ್ಸ್ ಮಾಡಿಸಿದ್ದ ಬಸವರಾಜ‌‌ ಹಣಮಂತನ ಹೆಸರಲ್ಲಿದ್ದ ಇನ್ಸೂರೆನ್ಸ್‌ಗೆ ನಾಮಿನಿ ಆಗಿದ್ದ ಬಸವರಾಜ್ ಅಣ್ಣ ಸತ್ತರೆ ತನಗೆ ಲಾಭ ಎಂದು ಭಾವಿಸಿ ಅಣ್ಣನಿಗೆ ಚಟ್ಟ ಕಟ್ಟಿದ ಸಹೋದರ.

ಕಂಠಪೂರ್ತಿ ಕುಡಿಸಿ ತನ್ನ ಗ್ಯಾಂಗ್ ನೊಂದಿಗೆ ಅಣ್ಣನನ್ನು ಕರೆದೊಯ್ದಿದ್ದ ಸಹೋದರ ಶ್ರೀಗಂಧದ ಕಟ್ಟಿಗೆಗಳಿವೆ ಅದನ್ನು‌ ತರಲು ಹೋಗೋಣ ಬಾ ಎಂದು ಕರೆದುಕೊಂಡು ಹೋಗಿದ್ದ ಚಾಲಾಕಿ ಈ ವೇಳೆ ಹನಮಂತನ ತಲೆಗೆ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದ ಆರೋಪಿಗಳು.

ಮೃತನ ಸಹೋದರ ಬಸವರಾಜ್ ತಳವಾರ, ಬಾಪು ಶೇಖ್, ಈರಪ್ಪ ಹಡಗಿನಾಳ, ಸಚಿನ್ ಕಂಟೆನ್ನವರ್ ಬಂಧಿತರು‌ ಕೊಲೆ ಮಾಡಿ‌ ಹಣಮಂತ ಶವ ಸಿಗ್ತಿದ್ದಂತೆ ಊರು ಬಿಟ್ಟಿದ್ದ ನಾಲ್ವರು ಆರೋಪಿಗಳು ಮೊಬೈಲ್ ಟವರ್ ಲೊಕೇಷನ್ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರು.

ನವೆಂಬರ್ 7 ರಂದು ಹಣಮಂತನ ಕೊಲೆಗೈದು ಪರಾರಿಯಾಗಿದ್ದ ಆರೋಪಿಗಳು ಬೆಳಗಾವಿ ಜಿಲ್ಲೆಯ ‌ಘಟಪ್ರಭಾ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಘಟನೆ ಶವ ಪತ್ತೆಯಾಗುತ್ತಿದ್ದಂತೆ ಊರು ಬಿಟ್ಟವರ ಬಂಧಿಸಿದ ಘಟಪ್ರಭಾ ಪೊಲೀಸರು ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಬಳಿ ನಡೆದಿದ್ದ ಘಟನೆ ನಡೆದಿದೆ‌.