ಉ.ಕ ಸುದ್ದಿಜಾಲ ಬೆಳಗಾವಿ :

ಆತ್ಮಹತ್ಯೆಗೆ ಯತ್ನಿಸಿದ್ದ ರಾಣಿ ಚೆನ್ನಮ್ಮ ವಿವಿ ವಿದ್ಯಾರ್ಥಿ ಚಿಕಿತ್ಸೆ ಫಲಿಸದೇ ಸಾವು.ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿಯಲ್ಲಿರು ರಾಣಿ ಚೆನ್ನಮ್ಮ ‌ವಿಶ್ವವಿದ್ಯಾಲಯದಲ್ಲಿ‌ ನಿನ್ನೆ ತಡರಾತ್ರಿ ಹಾಸ್ಟೆಲ್‌ನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಎಂಬಿಎ ವಿದ್ಯಾರ್ಥಿ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದ ಚೇತನ ನಾಯ್ಕ (23) ಚಿಕಿತ್ಸೆ ಫಲಿಸದೇ ಸಾವನಪ್ಪಿದ್ದಾನೆ. ಪ್ರೇಮ ಪ್ರಕರಣವೇ ಆತ್ಮಹತ್ಯೆಗೆ ಕಾರಣ ಎಂದು ಪೊಲೀಸರ ಶಂಕೆ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯ ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಪೋಷಕರು ತಮ್ಮ ಮಕ್ಕಳ ಉತ್ತಮ ಉಜ್ವಲ ಭವಿಷ್ಯಕ್ಕಾಗಿ ಸಾಲಸೊಲ ಮಾಡಿ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರದ ಊರಿಗೆ ಕಳಿಸಿದರೆ. ಇವರು ವಿದ್ಯಾಭ್ಯಾಸ ಬಿಟ್ಟು ಬೇರೆನೆ ಮಾಡತ್ತಿದ್ದಾರೆ‌. ಹೀಗೆ ಎಲ್ಲ ವಿದ್ಯಾರ್ಥಿಗಳು ಮಾಡತ್ತಾರೆ ಅಂತಾ ಅಲ್ಲಾ.

ಕೆಲ ವಿದ್ಯಾರ್ಥಿಗಳು ಇಂತಹ ಕೆಟ್ಟ ನಿರ್ಧಾರಗಳಿಂದ ಪೋಷಕರಿಗೆ ಎಷ್ಟು ನೋವಾಗಿರಬಹುದು. ಕೇವಲ 23 ವರ್ಷದ ಮಗ‌‌. ಕಷ್ಟ ಒಟ್ಟುಬಬೆಳಸಿ ಇನ್ನೂ ಮುಂದೆ‌ ನಮ್ಮಗೆ‌ಬಆಸರೆ ಆಗತಾರಲ್ಲ ಅನ್ನುವ ನಿರೀಕ್ಷೆಯಲ್ಲಿದ್ದ ಪೋಷಕರು. ಇವರು‌ ಮಾಡುವ ಇಂತ ಒಂದು‌ ತಪ್ಪಿನಿಂದ ಹೆತ್ತ ಜೀವಗಳು ಎಷ್ಟು ನೊಂದಕೊಳ್ಳಬಹುದು ಎನ್ನುವ ಪರಿಜ್ಞಾನ ಕೂಡಾ ಇಲ್ಲ.