ಉ.ಕ‌ ಸುದ್ದಿಜಾಲ ರಾಯಬಾಗ :

ಸರ್ಕಾರಿ ಜಾಗಕ್ಕಾಗಿ ಎರಡು ಕುಟುಂಬಗಳ ಮಧ್ಯೆ ತಿಕ್ಕಾಟ. ಒಂದು ಕುಟುಂಬದಿಂದ ತಡರಾತ್ರಿ ಶೆಡ್ ಗೆ ಬೆಂಕಿ ಇಟ್ಟ ಆರೋಪ. ಬೆಂಕಿಯ ಕೆನ್ನಾಲಗೆಗೆ ಸುಟ್ಟು ಕರಕಲಾದ ಶೆಡ್.

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೋಡ ಗ್ರಾಮದಲ್ಲಿ ಘಟನೆ. ಮುಗಳಖೋಡ ಗ್ರಾಮದಲ್ಲಿನ ಗೋಮಾಳ‌ ಜಾಗಕ್ಕಾಗಿ ಎರಡು ಕುಟುಂಬಗಳ ಮಧ್ಯೆ ಜಗಳವಿತ್ತು.‌ ಗೋಮಾಳ ಜಾಗದಲ್ಲಿ ಶೆಡ್ ಹಾಕಿಕೊಂಡಿದ್ದ ಮಹಾದೇವ ಮಾದರ್ ಕುಟುಂಬ. ಸುಮಾರು 12 ಗುಂಟೆ ಗೋಮಾಳ ಜಾಗದಲ್ಲಿ ಹಾಕಿದ್ದ ಶೆಡ್.

ಶೆಡ್ ಗೆ ಅದೇ ಊರಿನ ಮಹಾವೀರ ಕುರಾಡೆ ಕುಟುಂಬದವರು ಬೆಂಕಿ ಇಟ್ಟಿರುವ ಆರೋಪ ಕೇಳಿ ಬಂದಿದೆ. ಬಹಳ ದಿನಗಳಿಂದಲೂ ಎರಡೂ ಕುಟುಂಬಗಳ ನಡೆದಿದ್ದ ವ್ಯಾಜ್ಯ. ತಡರಾತ್ರಿ ಬೆಂಕಿ ಇಟ್ಟಿರುವ ಆರೋಪಿಸಿ ವಿಡಿಯೋ ವೈರಲ್.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು. ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.