ಉ.ಕ ಸುದ್ದಿಜಾಲ ತುಮಕೂರು :

ಅಪ್ರಾಪ್ತೆಯನ್ನ ಲೈಂಗಿಕ ದೌರ್ಜನ್ಯಕ್ಕೆ ತಳ್ಳಿದ ಮಲತಾಯಿ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ ತುಮಕೂರು ಜಿಲ್ಲಾ ಸತ್ರ ನ್ಯಾಯಾಲಯ ಎಫ್ ಟಿ ಎಸ್ಸಿ ಪೋಕ್ಸೋ ನ್ಯಾಯಾಲಯದಿಂದ ಆದೇಶ. ಆರೋಪಿ ಅರುಣ್ ಕುಮಾರ್ ಗೆ ಶಿಕ್ಷೆ ಜೊತೆ 1 ಲಕ್ಷ 50 ಸಾವಿರ ರೂ. ದಂಡ

ಅಜ್ಜಿ ಗಂಗಮ್ಮ, ಹಾಗೂ ಮಲತಾಯಿ ರತ್ನಮ್ಮ ತಲಾ 1 ಲಕ್ಷ ರೂ. ದಂಡ ಸಹಿತ ಶಿಕ್ಷೆ ಅಪ್ರಾಪ್ತೆಗೆ ಕಾನೂನು ಸೇವಾ ಪ್ರಾಧಿಕಾರದಿಂದ 13 ಲಕ್ಷ 50 ಸಾವಿರ ರೂ. ಪರಿಹಾರ ನೀಡುವಂತೆ ಆದೇಶ.

ಘಟನೆ ಹಿನ್ನೆಲೆ :
ಮೊದಲ ಪತ್ನಿಗೆ ಐವರು ಹೆಣ್ಣು ಮಕ್ಕಳು ಅನ್ನೋ ಕಾರಣಕ್ಕೆ ಮತ್ತೊಂದು ಮದುವೆಯಾಗಿದ್ದ ಪತಿ. ಮಲ ತಾಯಿಗೆ ಮಕ್ಕಳು ಇರದ ಕಾರಣ ಹೊಟ್ಟೆ ಕಿಚ್ಚಿನಿಂದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಕುಮ್ಮಕ್ಕು. ಕೂಲಿ ಕೆಲಸದ ನೆಪದಲ್ಲಿ ಮಲತಾಯಿ ರತ್ನಮ್ಮ ಹಾಗೂ ಅಜ್ಜಿ ಗಂಗಮ್ಮ ಸಂತ್ರಸ್ತೆಯನ್ನ ಕರೆದೊಯ್ದಿದ್ರು.

ಈ ವೇಳೆ ಶೆಡ್ ನಲ್ಲಿ ಕೂಡಿ ಹಾಕಿ ಆರೋಪಿ ಅರುಣ್ ಕುಮಾರ್ ನಿಂದ ಲೈಂಗಿಕ ದೌರ್ಜನ್ಯ. ಮೂರು ನಾಲ್ಕು ತಿಂಗಳು ನಿರಂತರವಾಗಿ ಸಂತ್ರಸ್ತೆಗೆ ಲೈಂಗಿಕ ದೌರ್ಜನ್ಯ. ಲೈಂಗಿಕ ದೌರ್ಜನ್ಯದ ವೇಳೆ ಶೆಡ್ ಹೊರಗೆ ಕಾವಲು ಇರುತಿದ್ದ ಮಲತಾಯಿ ಹಾಗೂ ಅಜ್ಜಿ.

ಘಟನೆ ಸಂಬಂಧ ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಿದ್ದ ಸಂತ್ರಸ್ತೆ. ತನ್ನ ಚಿಕ್ಕಮ್ಮ ಹಾಗೂ ಆಕೆಯ ತಾಯಿ ನಡೆಸಿದ ಕೃತ್ಯದ ಬಗ್ಗೆ ತಾಯಿ ಬಳಿ ಹೇಳಿಕೊಂಡ ಅಪ್ರಾಪ್ತೆ ಘಟನೆ ಸಂಬಂಧ ಪೋಕ್ಸೋ ಕೇಸ್ ದಾಖಲಿಸಿಕೊಂಡು ತನಿಖೆ. ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದ ಪೊಲೀಸರು.

ಪ್ರಕರಣ ಸಂಬಂಧ ವಿಚಾರಣೆ ನಡೆಸಿದಾಗ ಅಪ್ರಾಪ್ತೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರೋದು ಸಾಬೀತು. ಆರೋಪಿ ಅರುಣ್ ಕುಮಾರ್, ಮಲತಾಯಿ ರತ್ನಮ್ಮ, ಅಜ್ಜಿ ಗಂಗಮ್ಮಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಲಯ ಆದೇಶ. ಪ್ರಕರಣದಲ್ಲಿ ಸರ್ಕಾರಿ ಅಭೀಯೋಜಕಿಯಾಗಿ ವಾದ ಮಂಡಿಸಿದ ಕೆ.ಎಸ್.ಆಶಾ.