ಉ.ಕ ಸುದ್ದಿಜಾಲ ವಿಜಯಪುರ :
ದಸರಾ ಹಬ್ಬದ ಮರು ದಿನವೇ ವಿಜಯಪುರ ಜಿಲ್ಲೆಯಲ್ಲಿ ಗುಂಡಿನ ಸದ್ದು. ವಿಜಯಪುರ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಘಟನೆ. ದುರ್ಗಾ ದೇವಿ ಜಾತ್ರೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಎರಡು ಗುಂಪುಗಳ ಮಧ್ಯೆ ಜಗಳ.
ತಾರಕ್ಕೇರಿದ ಜಗಳ ರಾಮು ಅಂಕಲಗಿ ಎಂಬಾತನಿಂದ ಗಾಳಿಯಲ್ಲಿ ಗುಂಡು. ಪರವಾನಿಗೆ ಹೊಂದಿದ ರಿವಾಲ್ವಾರ್ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ ರಾಮು ಅಂಕಲಗಿ. ಗಾಳಿಯಲ್ಲಿ ಗುಂಡು ಬಾಲಕಿ ತೊಡೆಗೆ ತಾಗಿ ಪಾರಾದ ಗುಂಡು. ಮಹಾರಾಷ್ಟ್ರ ಮೂಲದ ಬಾಲಕಿ ತೊಡೆಗೆ ತಾಗಿದ ಗುಂಡು
ಜಿಲ್ಲಾಸ್ಪತ್ರೆಗೆ ಬಾಲಕಿ ದಾಖಲು ಚಿಕಿತ್ಸೆ. ಗಲಾಟೆ ವೇಳೆ ಬಟ್ಟೆ ಒಣಗಿಸಲು ಮನೆಯ ಮೇಲ್ಚಾವಣಿ ಮೇಲೆ ನಿಂತಿದ್ದ ಬಾಲಕಿ. ಈ ವೇಳೆ ಬಾಲಕಿ ಪಲ್ಲವಿ ಬಲಗಾಲಿಗೆ ತಾಗಿದ ಗುಂಡು. ನಿನ್ನೆ ಅಂಕಲಗಿ ಗ್ರಾಮದಲ್ಲಿ ದುರ್ಗಾ ದೇವಿ ಜಾತ್ರೆ ನಡೆದಿತ್ತು..
ಈ ವೇಳೆ ಎರಡು ಗುಂಪುಗಳ ನಡುವೆ ಜಗಳವಾಗಿತ್ತು. ಇಂದು ಜಗಳ ಬಗ್ಗೆ ಮಾತುಕತೆ ಮಾಡಲು ಸಭೆ ಕರೆಯಲಾಗಿತ್ತು. ಸಭೆ ಸಂದರ್ಭದಲ್ಲಿ ಒಂದು ಗುಂಪಿನಿಂದ ರಾಮ್ ಅಂಕಲಗಿ ಎಂಬಾತನ ಮೇಲೆ ಹಲ್ಲೆ ಆರೋಪ. ಈ ವೇಳೆ ಪರವಾನಿಗೆ ಹೊಂದಿರುವ ರಿವಾಲ್ವರ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ ರಾಮ್ ಅಂಕಲಗಿ..
ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರ ಭೇಟಿ.. ಜಿಲ್ಲಾಸ್ಪತ್ರೆಗೆ ಎಎಸ್ಪಿ ರಾಮನಗೌಡ ಹಟ್ಟಿ ಡಿವೈಎಸ್ಪಿ ಟಿ ಎಸ್ ಸುಲ್ಪಿ ಭೇಟಿ .. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ಮುಂದುವರೆದ ಪೊಲೀಸರ ತನಿಖೆ
ದಸರಾ ಹಬ್ಬದ ಮರು ದಿನವೇ ವಿಜಯಪುರ ಜಿಲ್ಲೆಯಲ್ಲಿ ಗುಂಡಿನ ಸದ್ದು
