ಉ.ಕ ಸುದ್ದಿಜಾಲ ನಿಪ್ಪಾಣಿ :
ಉಪಹಾರಕ್ಕಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ನೀರು ತರಲು ಹೋದಾಗ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ ಘಟಣೆ ನಿಪ್ಪಾಣಿ ತಾಲೂಕಿನ ಗಳತಗಾ ಗ್ರಾಮದಲ್ಲಿ ಸಂಭವಿಸಿದೆ.
ಗಳತಗಾ ಗ್ರಾಪಂ ವ್ಯಾಪ್ತಿಯ ಭೀಮಾಪುರವಾಡಿ ಗ್ರಾಮದ 21ವರ್ಷದ ಯುವಕ ಸುನೀಲ ಬಾಳಾಸಾಹೇಬ ತಳಕರ ಎಂಬುವರೆ ಮೃತಪಟ್ಟ ವ್ಯಕ್ತಿ.
ಸುನೀಲ ಇತನು ಕಳೆದ ಎರಡು ವರ್ಷಗಳಿಂದ ಕಬ್ಬು ಕಟಾವು ಮಾಡಲು ಹೋಗುತ್ತಿದ್ದನು. ಮುಂಜಾನೆ ರೈತ ಮಹಾವೀರ ಖೋತ ಅವರು ಕಟಾವುದಾರರಿಗೆ ಚಹಾ-ಉಪಹಾರದ ವ್ಯವಸ್ಥೆ ಮಾಡಿದ್ದರು, ತಮ್ಮ ಸಹಚರರಿಗೆ ನೀರು ತರಲು ಹೋದಾಗ ಹೊಲದಲ್ಲಿನ ಬಾವಿಯಲ್ಲಿ ಕಾಲುಜಾರಿ ಬಿದ್ದಿದ್ದಾನೆ.
ನೀರು ತರಲು ಹೋದವನು ಇನ್ನು ಏಕೆ ಬಂದಿಲ್ಲಾ ಎಂದು ನೋಡಿದಾಗ ಬಾವಿಯ ಗೋಡೆ ಕುಸಿದು ಬಾವಿಯಲ್ಲಿ ಬಿದ್ದದು ಕಂಡು ಬಂದಿದೆ. ನಂತರ ಅಲ್ಲಿದ್ದ ರೈತರು ಹಾಗೂ ಕಾರ್ಮಿಕರು ಸದಲಗಾ ಪೊಲೀಸ್ ಠಾಣೆಗೆ ನಡೆದ ಘಟಣೆಯ ಕುರಿತು ತಿಳಿಸಿದ್ದಾರೆ.
ಸದಲಗಾ ಪಿಎಸ್ಐ ಶಿವಕುಮಾರ ಬಿರಾದಾರ ಆಗಮಿಸಿ ಘಟಣೆಯ ವಿವರ ಪಡೆದರು. ಅಗ್ನಿಶ್ಯಾಮಕ ದಳದ ಸಿಬ್ಬಂದಿ ಮೃತದೇಹ ಬಾವಿಯಿಂದ ಹೊರತೆಗೆದರು. ಈ ಕುರಿತು ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾವಿಯಲ್ಲಿ ಬಿದ್ದು ಯುವಕ ಸಾವು, ನಿಪ್ಪಾಣಿ ತಾಲೂಕಿನ ಗಳತಗಾ ಗ್ರಾಮದಲ್ಲಿ ಘಟನೆ


