ಉ.ಕ ಸುದ್ದಿಜಾಲ ಹಾವೇರಿ :
ವೈದ್ಯರ ನಿರ್ಲಕ್ಷ್ಯ ಮಹಿಳೆ ಸಾವು ಆರೋಪ ಹಾವೇರಿ ನಗರದ ಖಾಸಗಿ ಆಸ್ಪತ್ರೆ ವೀರಾಪೂರ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ಸಮೀನಾ ಬಾನು (29) ಸಾವು ಹಿನ್ನಲೆ ಆಸ್ಪತ್ರೆಯ ಬಳಿ ಮೃತ ಮಹಿಳೆಯ ಸಂಬಂಧಿಕರಿಂದ ಗದ್ದಲ ಹಾಗೂ ಆಕ್ರೋಶ.
ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದ ನಿವಾಸಿಯಾಗಿರುವ ಸಮೀನಾ ಶುಕ್ರವಾರ ಸಂಜೆ ಬ್ಯಾಡಗಿ ಸರ್ಕಾರಿ ಆಸ್ಪತ್ರೆಯಿಂದ ನಗರದ ವೀರಾಪೂರ ಆಸ್ಪತ್ರೆಗೆ ದಾಖಲು ಅಪ್ಪಂಡಿಸ್ ಕಾರಣ ಆಸ್ಪತ್ರೆಗೆ ಬಂದಿದ್ದ ಮಹಿಳೆಗೆ ಇಂಜೆಕ್ಷನ್ ಮಾಡಿದ್ದ ವೈದ್ಯರು ಹಾಗೂ ಸಿಬ್ಬಂದಿ.
ವೈದ್ಯರು ಪರೀಕ್ಷೆ ಮಾಡದೆ ಇಂಜೆಕ್ಷನ್ ಮಾಡಿದ್ದೆ ಸಾವಿಗೆ ಕಾರಣ ಎನ್ನುತ್ತೀರುವ ಕುಟುಂಬಸ್ಥರು. ಮಹಿಳೆಯು ಬೇಡ ಎಂದರು ಇಂಜೆಕ್ಷನ್ ಮಾಡಿದ್ದಾರೆಂದು ಆರೋಪ ನಮ್ಮ ಮಗಳ ಸಾವಿಗೆ ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರು ಕಾರಣ.

ನಮ್ಮ ಸಾವಿಗೆ ನ್ಯಾಯ ಬೇಕು ಬರುವಾಗ ಆರಾಮವಾಗಿ ನಡೆದುಕೊಂಡು ಬಂದಿದ್ದಳು ಈಗ ನಮ್ಮ ಸಮೀನಾ ಬಾನುಳನ್ನು ಸಾಯಿಸಿದ್ದಾರೆ ಎಂದು ಆಕ್ರೋಶ ಸ್ಥಳಕ್ಕೆ ಪೋಲಿಸರ ದೌಡು,ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಹಾವೇರಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.