ಉ.ಕ ಸುದ್ದಿಜಾಲ ಚಿಕ್ಕೋಡಿ :
ಕಾರ ಹಾಗೂ ಕೆ ಎಸ್ ಆರ್ ಟಿ ಸಿ ಬಸ ನಡುವೆ ಅಪಘಾತ ಕಾರಿನಲ್ಲಿದ್ದ ಮಹಿಳೆ ಸ್ಥಳದಲ್ಲಿಯೇ ಸಾವು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ಬಳಿ ಘಟನೆ ನಡೆದಿದೆ.
ನಿಪ್ಪಾಣಿ – ಮುಧೋಳ ರಾಜ್ಯ ಹೆದ್ದಾರಿ ಉಮರಾಣಿ ಬಳಿ ಅಪಘಾತ. ಹೆಸ್ಕಾಂ ಚಿಕ್ಕೋಡಿ ಉಪವಿಭಾಗ ಸಹಾಯಕ ಅಭಿಯಂತ ನೇಮಿನಾಥ ಬರಮು ಅವಟೆ ಕಾರು ಅಪಘಾತ. ಅದೃಷ್ಟವಶಾತ ಕಾರಿನ ಎರಡು ಏರ್ ಬ್ಯಾಗ್ ಗಳು ಓಪನ್ ಆಗಿದ್ದರಿಂದ ಕಾರಿನಲ್ಲಿರುವ ಹೆಸ್ಕಾಂ ಇಂಜಿನಿಯರ್ ಬದುಕುಳಿದಿದ್ದಾರೆ.
ಆದರೆ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ ನೇಮಿನಾಥ ತಾಯಿ ಸ್ಥಳದಲ್ಲಿ ಸಾವು ನಿರ್ಮಲ ಭರಮು ಅವಟೆ (60) ಮೃತ ಮಹಿಳೆ ಮೂಲತಃ: ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಅವಟೆ ಕುಟುಂಬ ಚಿಕ್ಕೋಡಿ ನಗರದ ಯಾದವ್ ನಗರದಲ್ಲಿ ವಾಸಿಸುತ್ತಿದ್ದ ಅವಟೆ ಕುಟುಂಬ.
ಗಾಯವಾದ ಹೆಸ್ಕಾಂ ಅಭಿಯಂತ ನೇಮಿನಾಥ ಅವರಿಗೆ ಚಿಕ್ಕೋಡಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.