ಧಾರವಾಡ :
ಅನೈತಿಕ ಸಂಬಂಧ ಹಿನ್ನಲೆ ವ್ಯಕ್ತಿಯ ಬರ್ಭರ ಕೊಲೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ಮುಳಮುತ್ತಲ ಗ್ರಾಮದಲ್ಲಿ ನಡೆದಿದೆ.
ಪತ್ನಿಯ ಪ್ರಿಯಕರನಿಂದಲೇ ಕೊಲೆ ಮಾಡಲಾಗಿದ್ದು, ಬೀಮಪ್ಪ ಸಿದ್ದಪ್ಪ ಕರಿಸಿದ್ದನ್ನವರ(30)ಕೊಲೆಯಾದ ವ್ಯಕ್ತಿ. ಶಿವು ನಿಂಬೋಜಿ ಎಂಬಾತನಿಂದ ಕೊಲೆ ಮಾಡಲಾಗಿದೆ. ಕೊಡಲಿಯಿಂದ ಕೊಚ್ಚಿ ಬರ್ಭರ ಹತ್ಯೆ ಮಾಡಿದ ಶಿವು ನಿಂಬೋಜಿ, ಕೊಲೆ ಮಾಡಿರುವ ಆರೋಪಿ ಮತ್ತು ಕೊಲೆಗೆ ಸಹಾಯ ಮಾಡಿದ್ದ ಕಾವೇರಿಯನ್ನ ಬಂಧಿಸಿರುವ ಪೊಲೀಸರು
ಘಟನೆ ಸ್ಥಳಕ್ಕೆ ಗರಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.