ಉ.ಕ ಸುದ್ದಿಜಾಲ ಕಾಗವಾಡ :

ಬೆಳಗಾವಿ ಜಿಲ್ಲೆಯ ಕಾಗವಾಡ ಠಾಣಾ ವ್ಯಾಪ್ತಿಯ ಶೇಡಬಾಳ ರೇಲ್ವೆ ಸ್ಟೇಷನ,  ಲೋಕೂರ, ಮಂಗಸೂಳಿ,  ನವಲಿಹಾಳ,  ಕಿಡಗೇಡಿ,  ಕೆಂಪವಾಡ. ಹಾಗೂ ಸುತ್ತಮುತ್ತಲಿನ ಗ್ರಾಮದ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ

ಇತ್ತೀಚಿನ ದಿನಗಳಲ್ಲಿ ಆರರಿಂದ ಏಳು ಜನರ ಧಕಾಯಿತರ ಗುಂಪು, ರಾತ್ರಿ ವೇಳೆಯಲ್ಲಿ ಒಂಟಿಮನೆಯಲ್ಲಿ ವಾಸಿಸುತ್ತಿರುವ ಮನೆಯ ಬಾಗಿಲಗಳನ್ನು ಮುರಿದು ದಾಳಿಮಾಡಿ ಹೆಣ್ಣುಮಕ್ಕಳ ಮೈ ಮೇಲಿನ ಬಂಗಾರದ ಆಭರಣಗಳನ್ನು ಕಸಿದು ಕೊಂಡು ಹೋಗುವ ದರೋಡೆಕೋರರು ಆಗಮಿಸಿದ್ದು, ಆದ ಕಾರಣ ಎಲ್ಲ ಸಾರ್ವಜನಿಕರು ಈ ಕೆಳಗಿನ  ಮುನ್ನೆಚ್ಚರಿಕೆ ಕ್ರಮವಹಿಸಲು ಸೂಚಿಸಲಾಗಿದೆ.

ನಿಮ್ಮ ಬೆಲೆ. ಬಾಳುವ ಬಂಗಾರದ ಆಭರಣಗಳು ಬೆಳ್ಳಿ ಹಣವನ್ನು ಬ್ಯಾಂಕಿನಲ್ಲಿ ಇತ್ತ ಕೊಳ್ಳಬೇಕು.

ಸಂಶಯ ಬಂದ ಕೂಡಲೇ 112 ಅಥವಾ ಠಾಣೆಗೆ ಕರೆ ಮಾಡಿ.

ತೋಟದಲ್ಲಿ ಒಂಟಿ ಮನೆಗಳಲ್ಲಿ ವಾಸಿಸುವ ಜನರು, ತಮ್ಮ ಜೊತೆಗೆ ಮಲಗುವಾಗ, ಕಾರದ ಪುಡಿ, ಬ್ಯಾಟರಿ, ಮತ್ತು ಹರಿತವಾದ ಆಯುಧಗಳನ್ನು, ಇಟ್ಟುಕೊಳ್ಳಬೇಕು.

ಕೀಲಿ ಹಾಕಿದ  ದೇವಸ್ಥಾನಗಳಲ್ಲಿ ದೇವರ ಮೈಮೇಲೆ ಬೆಳ್ಳಿ ಮತ್ತು ಚಿನ್ನದ ಆಭರಣಗಳನ್ನು ಬಿಡಬಾರದು.

ರಾತ್ರಿ ವೇಳೆಯಲ್ಲಿ ಯಾರಾದರೂ ಸಂಶಯಸ್ಪದವಾಗಿ ಬಾಗಿಲು ತಟ್ಟಿದಾಗ ಬಾಗಿಲು ತೆರೆಯದೆ, ಪಕ್ಕದ ಮನೆಯವರಿಗೆ ಮಾತನಾಡುವದು ಪೊಲೀಸ್ ಠಾಣೆಗೆ ಮತ್ತು 112 ಗೆ ಕರೆ ಮಾಡುವದು.

ಒಬ್ಬರೇ ಮನೆಗಳಲ್ಲಿ ಮಲಗಿಕೊಳ್ಳುವಾಗ ಕಾರದಪುಡಿ ಹಾಗೂ ಇತರೆ ಸುರಕ್ಷಿತ ಆಯುಧಗಳನ್ನು ಇಟ್ಟುಕೊಳ್ಳುವುದು.

ಈ ಮೇಲಿನ ವಿಷಯಗಳ ಬಗ್ಗೆ ಪಟ್ಟಣ ಪಂಚಾಯತ್ ಮತ್ತು ಗ್ರಾಮ ಪಂಚಾಯತ ರವರು ಸಾರ್ವಜನಿಕರಿಗೆ ಧ್ವನಿ ವರ್ಧಕಗಳ ಮೂಲಕ ಕೂಡಲೇ ಸಾರ್ವಜನಿಕ ಪ್ರಕಟಣೆ ಮಾಡುವದು.

ಎಲ್ಲ ತೋಟದ ಮತ್ತು ಗ್ರಾಮಗಳಲ್ಲಿ ಪ್ರತಿ ರಾತ್ರಿ ಯುವಕರು ಗುಂಪಾಗಿ ಕಾವಲು ಕಾಯುವದು

ಎಲ್ಲ ಗ್ರಾಮಸ್ಥರು ಕಡ್ಡಾಯವಾಗಿ ಇವುಗಳನ್ನು ಪಾಲಿಸಲು ಕಾಗವಾಡ ಪೋಲಿಸ್ ಠಾಣೆಯಿಂದ ಕೋರಲಾಗಿದೆ.