ಉ.ಕ ಸುದ್ದಿಜಾಲ ತುಮಕೂರು :
ನಿಖಿಲ್ ಕುಮಾರಸ್ವಾಮಿಗೆ ಶುರುವಾಗಿದೆ ರಾಜಯೋಗ ಚನ್ನಪಟ್ಟಣ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಗೆಲ್ತಾರೆ. ತುಮಕೂರಿನಲ್ಲಿ ಡಾ ಲಕ್ಷ್ಮೀಕಾಂತ್ ಆಚಾರ್ಯ ಗುರೂಜಿ ಹೇಳಿದ್ದಾರೆ.
2016 ರಲ್ಲಿ ಹೆಚ್ ಡಿ ದೇವೆಗೌಡರು ಮಾಡಿಸಿದ ಚಂಡಿಕಾಯಾಗದ ಫಲ, 2024 ಕ್ಕೆ ಲಭಿಸಿದೆ. ಅಂದು ಅಮ್ಮನವರ ಸನ್ನಿಧಿಯಲ್ಲಿ ಚಂಡಿಕಾಯಾಗ ಮಾಡಿಸಿದ್ದ ದೇವೆಗೌಡರು. ಅಂದೇ ನಿಖಿಲ್ ಕುಮಾರಸ್ವಾಮಿಯ ಭವಿಷ್ಯ ನುಡಿದಿದ್ದ ಮುಕಾಬಿಂಕಾ ದೇವಿ.
ತುಮಕೂರು ತಾಲೂಕಿನ ಚಿನಗ ಗ್ರಾಮದಲ್ಲಿರುವ ಮುಕಾಬಿಂಕಾ ದೇವಿ. 2023 ರ ನಂತರ ನಿಖಿಲ್ ಕುಮಾರಸ್ವಾಮಿಗೆ ರಾಜಯೋಗ ಶುರು ಎಂದು ಭವಿಷ್ಯ. ಅದರಂತೆ ನಿಖಿಲ್ ಕುಮಾರಸ್ವಾಮಿಗೆ 2023 ರಿಂದಲೇ ಶುರುವಾಗಿದೆಯಂತೆ ರಾಜಯೋಗ.
ಭಗವತಿಯ ಪರಿಪೂರ್ಣ ಆಶಿರ್ವಾದ ಆಗಿದೆ.ಅಮ್ಮನವರು ಒಪ್ಪಿಗೆ ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಆಶಿರ್ವಾದ ಹಾಗೆ ಆಗುತ್ತೆ. ಒಳ್ಳೆಯ ಅನುಗ್ರಹ ಆಗುತ್ತೆ. ಜಯಶೀಲರಾಗುವಂತಹ ಎಲ್ಲಾ ಅನುಗ್ರಹವನ್ನ ಅಮ್ಮನವರು ಮಾಡಿಕೊಟ್ಟಿದ್ದಾರೆ.
ಈ ಬಾರಿ ಅಮ್ಮನವರ ಆಶಿರ್ವಾದ ಆಗಿರೋದ್ರಿಂದ ಖಂಡಿತವಾಗಿ ಗೆಲುವು ಖಚಿತವಾಗಿದೆ. ಅವರ ನಿರೀಕ್ಷೆಗೂ ಮಿರಿದ ಅಂತರವನ್ನ ಅಮ್ಮನವರು ಸೂಚಿಸಿದ್ದಾರೆ. ಯಾಕಂದ್ರೆ ಚಂಡಿಕಾಯಾಗದಲ್ಲಿ ಅಷ್ಟೊಂದು ರೀತಿಯಾದ ವಿಶೇಷತೆಗಳು ಇರುತ್ತೆ.
ಯಾರು ಅನುಷ್ಠಾನವನ್ನ ಮಾಡಿ ವಿಶೇಷವಾಗಿ ದೇವಿಗೆ ಪೂಜೆಯನ್ನ ಸಲ್ಲಿಸ್ತಾರೋ, ಅವರಿಗೆ ಪರಿಪೂರ್ಣವಾದ ಆಶಿರ್ವಾದ ಪರಿಪಾಪ್ತಿಯಾಗುತ್ತೆ. ಮಹಾಲಕ್ಷ್ಮಿ,ಮಹಾಕಾಳಿ, ಮಹಾ ಸರಸ್ಪತಿಯ ಸ್ವರೂಪಿಣಿಯಾಗಿರುವಂತಹ ಅಮ್ಮನವರ ಆಶಿರ್ವಾದ ಆಗಿರೋದ್ರಿಂದ. ಖಂಡಿತವಾಗಿ ಅವರ ಕುಟುಂಬಕ್ಕೆ ಒಳ್ಳೆಯ ಅನುಗ್ರಹ ಆಗುತ್ತೆ.
ಅವರ ಮುಂದಿನ ಜೀವನವೂ ಕೂಡಾ ಸುಗಮವಾಗಿ ಇರುತ್ತೆ. ಹಿಂದಿನ ನೋವುಗಳನ್ನ ಮರೆಸಿ ಮುಂದಿನ ಜೀವನ ಸುಖಮಯವಾಗಿರುತ್ತೆ. ಪ್ರತಿಯೊಂದು ಅಧಿಕಾರ ಸಿಗಬೇಕಾದರೆ ರಾಜಯೋಗ ಇರಬೇಕು. ರಾಜಯೋಗ ಇಲ್ಲದೇ ಅಧಿಕಾರ ಸಿಗಲಿಕ್ಕೆ ಸಾಧ್ಯವಿಲ್ಲ.
ಅಮ್ಮನವರ ಆಶಿರ್ವಾದದಿಂದ ಈಗ ನಿಖಿಲ್ ಗೆ ರಾಜಯೋಗ ಸಿಕ್ಕಿದೆ. ಉನ್ನತ ಅಧಿಕಾರಗಳನ್ನ ಅನುಭವಿಸುವ ಅನುಗ್ರಹ ಪ್ರಾಪ್ತಿಯಾಗುತ್ತೆ. ಈ ಹಿಂದೆ ಎರಡು ಚುನಾವಣೆಯಲ್ಲೂ ಅಮ್ಮನವರು ಹೇಳಿದ್ರು. ನಿಮಗೆ ಹಿನ್ನಡೆಯಾಗುತ್ತೆ,
2023 ರ ನಂತರ ಒಳ್ಳೆಯದಾಗುತ್ತೆ ಅಂತ ಸೂಚಿಸಿದ್ರು. ಅದೇ ಪ್ರಕಾರವಾಗಿ ಈ ಒಂದು ಯೋಗ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಭಗವತಿಯ ಪರಿಪೂರ್ಣವಾದ ಆಶಿರ್ವಾದ ಆಗುತ್ತೆ. ಕಹಿ ನೆನಪುಗಳೆಲ್ಲಾ ಮಾಯವಾಗಿ ಒಳ್ಳೆಯ ರೀತಿಯ ಅನುಗ್ರಹ ಆಗುತ್ತೆ ಅಂದಿದ್ದಾರೆ.